<p><strong>ಸಿರಿಗೆರೆ:</strong> ಫೆ. 4ರಿಂದ 12ರವರೆಗೆ ಒಂಬತ್ತು ದಿನಗಳ ಕಾಲ ಭರಮಸಾಗರದಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಭಿನ್ನವಾಗಿ ಇರಲಿದೆ ಎಂದು ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಹುಣ್ಣಿಮೆ ಮಹೋತ್ಸವ ಆಚರಣೆಗೆ ನಿರ್ಮಾಣಗೊಳ್ಳುತ್ತಿರುವ ಮಹಾಮಂಟಪ ಕೆಲಸವನ್ನು ಶುಕ್ರವಾರ ವೀಕ್ಷಿಸಿದ ಶ್ರೀಗಳು ನಂತರ ನಿರಂಜನಮೂರ್ತಿ ಸಮುದಾಯ ಭವನದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ದೇಶ– ವಿದೇಶಗಳಿಂದ ವಿದ್ವಾಂಸರು, ಸಾಧಕರು ಮತ್ತು ರಾಜತಾಂತ್ರಿಕರು ಈ ಬಾರಿಯ ಹುಣ್ಣಿಮೆ ಮಹೋತ್ಸವದಲ್ಲಿ ಭಾಗಿ ಆಗುತ್ತಿರುವುದರಿಂದ ಹುಣ್ಣಿಮೆ ಮಹೋತ್ಸವಕ್ಕೆ ಅಂತರರಾಷ್ಟ್ರೀಯ ಮೆರುಗು ಒದಗಲಿದೆ ಎಂದರು.</p>.<p>‘ಎರಡು ವರ್ಷಗಳ ಹಿಂದೆ ಕೊಟ್ಟೂರು ಪಟ್ಟಣದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಘೋಷಣೆ ಮಾಡಿದ್ದಂತೆ ಕಳೆದ ವರ್ಷವೇ ಭರಮಸಾಗರದಲ್ಲಿ ಮಹೋತ್ಸವ ನಡೆಯಬೇಕಿತ್ತು. ಆದರೆ, ಭಕ್ತರ ಉತ್ಸಾಹ ಇಮ್ಮಡಿಗೊಂಡಿರುವ ಈ ವರ್ಷವೇ ಆಚರಣೆಗೆ ಸೂಕ್ತವೆಂದು ಅನ್ನಿಸಿದೆ. ಭರಮಸಾಗರ ಸುತ್ತಲಿನ ಕೆರೆಗಳು ತುಂಬಿ ರೈತರು ಸಂತೃಪ್ತರಾಗಿದ್ದಾರೆ. ಆಚರಣೆಯಲ್ಲಿ ಅವರು ಸಡಗರದಿಂದ ತೊಡಗಿಕೊಂಡಿರುವುದು ಸಂತೋಷ ತಂದಿದೆ’ ಎಂದರು.</p>.<p>‘ತರಳಬಾಳು ಹುಣ್ಣಿಮೆ ಮಹಾಮಂಟಪಕ್ಕೆ ‘ಬಿಚ್ಚುಗತ್ತಿ ಭರಮಣ್ಣನಾಯಕ’, ಮಹಾದ್ವಾರಕ್ಕೆ ‘ಒನಕೆ ಓಬವ್ವ’, ವೇದಿಕೆಗೆ ‘ಚಿನ್ಮೂಲಾದ್ರಿ ರೇವಣಸಿದ್ದೇಶ್ವರ’ ವೇದಿಕೆ ಎಂದು ನಾಮಕರಣ ಮಾಡಲಾಗುವುದು. ಜಿಲ್ಲೆಯ ಇತಿಹಾಸದಲ್ಲಿ ದಾಖಲಾಗಿರುವ ಈ ಪ್ರಾಥಃಸ್ಮರಣೀಯರನ್ನು ನೆನಪು ಮಾಡಿಕೊಳ್ಳುವುದು ತಮ್ಮ ಕರ್ತವ್ಯ’ ಎಂದರು.</p>.<p>ದೇಶದ ಹಿತಕ್ಕಾಗಿ ಹೋರಾಡುತ್ತ ವೀರಮರಣ ಹೊಂದಿರುವ ಹತ್ತು ಸೈನಿಕರ ಕುಟುಂಬಕ್ಕೆ ₹ 1 ಲಕ್ಷ ನೆರವು ನೀಡಲಾಗುವುದು ಎಂದು ಶ್ರೀಗಳು ಪ್ರಕಟಿಸಿದರು.</p>.<p>ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಎಮ್ಮೆಹಟ್ಟಿ ಕೃಷ್ಣಮೂರ್ತಿ, ಚೌಲಿಹಳ್ಳಿ ಶಶಿ ಪಾಟೀಲ್, ಜಿ.ಬಿ.ತೀರ್ಥಪ್ಪ, ಶೈಲೇಶ್ ಕುಮಾರ್, ನಿರಂಜನಮೂರ್ತಿ, ಹಂಪನೂರು ಜಗದೀಶ್, ಕೋಡಿರಂಗವ್ವನಹಳ್ಳಿ ಹನುಮಂತಪ್ಪ, ಓಬವ್ವನಾಗತಿಹಳ್ಳಿ ಮಂಜುನಾಥ್, ದೊಡ್ಡಾಲಗಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಸಿ.ಆರ್.ನಾಗರಾಜ್, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಭಾಗವಹಿಸಿದ್ದರು.</p>.<p><strong>ಚಕಿತಗೊಳಿಸಿದ ಭಕ್ತರ ಕೊಡುಗೆ</strong> </p><p>ಹುಣ್ಣಿಮೆ ಮಹೋತ್ಸವಕ್ಕೆ ಸುತ್ತಲಿನ ಗ್ರಾಮಗಳ ಭಕ್ತರು ತಮ್ಮ ಗ್ರಾಮಗಳಿಂದ ಸಂಗ್ರಹಿಸಿಕೊಂಡು ಬಂದಿದ್ದ ಕಾಣಿಕೆಯನ್ನು ಶ್ರೀಗಳಿಗೆ ಒಪ್ಪಿಸಿದರು. ಕಾರ್ಯಕರ್ತರು ಪ್ರಕಟಿಸುತ್ತಿದ್ದಂತೆ ಕಾಣಿಕೆಯನ್ನು ಶ್ರೀಗಳಿಗೆ ನೀಡಲು ಭಕ್ತರು ದುಂಬಾಲು ಬಿದ್ದರು. ಈ ಸಂದರ್ಭದಲ್ಲಿ ಚೌಲಿಹಳ್ಳಿ ಶಶಿ ಪಾಟೀಲ್ ತಮ್ಮ ಕುಟುಂಬದ ವತಿಯಿಂದ ₹ 10 ಲಕ್ಷ ಹಾಗೂ ಓಬವ್ವನಾಗತಿಹಳ್ಳಿ ಮಂಜುನಾಥ್ ₹ 4 ಲಕ್ಷ ನೀಡಿದರು. ವಿವಿಧ ಗ್ರಾಮಗಳ ಕೊಡುಗೆ ನೋಡಿ ತರಳಬಾಳು ಶ್ರೀ ಚಕಿತಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ:</strong> ಫೆ. 4ರಿಂದ 12ರವರೆಗೆ ಒಂಬತ್ತು ದಿನಗಳ ಕಾಲ ಭರಮಸಾಗರದಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಭಿನ್ನವಾಗಿ ಇರಲಿದೆ ಎಂದು ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಹುಣ್ಣಿಮೆ ಮಹೋತ್ಸವ ಆಚರಣೆಗೆ ನಿರ್ಮಾಣಗೊಳ್ಳುತ್ತಿರುವ ಮಹಾಮಂಟಪ ಕೆಲಸವನ್ನು ಶುಕ್ರವಾರ ವೀಕ್ಷಿಸಿದ ಶ್ರೀಗಳು ನಂತರ ನಿರಂಜನಮೂರ್ತಿ ಸಮುದಾಯ ಭವನದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ದೇಶ– ವಿದೇಶಗಳಿಂದ ವಿದ್ವಾಂಸರು, ಸಾಧಕರು ಮತ್ತು ರಾಜತಾಂತ್ರಿಕರು ಈ ಬಾರಿಯ ಹುಣ್ಣಿಮೆ ಮಹೋತ್ಸವದಲ್ಲಿ ಭಾಗಿ ಆಗುತ್ತಿರುವುದರಿಂದ ಹುಣ್ಣಿಮೆ ಮಹೋತ್ಸವಕ್ಕೆ ಅಂತರರಾಷ್ಟ್ರೀಯ ಮೆರುಗು ಒದಗಲಿದೆ ಎಂದರು.</p>.<p>‘ಎರಡು ವರ್ಷಗಳ ಹಿಂದೆ ಕೊಟ್ಟೂರು ಪಟ್ಟಣದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಘೋಷಣೆ ಮಾಡಿದ್ದಂತೆ ಕಳೆದ ವರ್ಷವೇ ಭರಮಸಾಗರದಲ್ಲಿ ಮಹೋತ್ಸವ ನಡೆಯಬೇಕಿತ್ತು. ಆದರೆ, ಭಕ್ತರ ಉತ್ಸಾಹ ಇಮ್ಮಡಿಗೊಂಡಿರುವ ಈ ವರ್ಷವೇ ಆಚರಣೆಗೆ ಸೂಕ್ತವೆಂದು ಅನ್ನಿಸಿದೆ. ಭರಮಸಾಗರ ಸುತ್ತಲಿನ ಕೆರೆಗಳು ತುಂಬಿ ರೈತರು ಸಂತೃಪ್ತರಾಗಿದ್ದಾರೆ. ಆಚರಣೆಯಲ್ಲಿ ಅವರು ಸಡಗರದಿಂದ ತೊಡಗಿಕೊಂಡಿರುವುದು ಸಂತೋಷ ತಂದಿದೆ’ ಎಂದರು.</p>.<p>‘ತರಳಬಾಳು ಹುಣ್ಣಿಮೆ ಮಹಾಮಂಟಪಕ್ಕೆ ‘ಬಿಚ್ಚುಗತ್ತಿ ಭರಮಣ್ಣನಾಯಕ’, ಮಹಾದ್ವಾರಕ್ಕೆ ‘ಒನಕೆ ಓಬವ್ವ’, ವೇದಿಕೆಗೆ ‘ಚಿನ್ಮೂಲಾದ್ರಿ ರೇವಣಸಿದ್ದೇಶ್ವರ’ ವೇದಿಕೆ ಎಂದು ನಾಮಕರಣ ಮಾಡಲಾಗುವುದು. ಜಿಲ್ಲೆಯ ಇತಿಹಾಸದಲ್ಲಿ ದಾಖಲಾಗಿರುವ ಈ ಪ್ರಾಥಃಸ್ಮರಣೀಯರನ್ನು ನೆನಪು ಮಾಡಿಕೊಳ್ಳುವುದು ತಮ್ಮ ಕರ್ತವ್ಯ’ ಎಂದರು.</p>.<p>ದೇಶದ ಹಿತಕ್ಕಾಗಿ ಹೋರಾಡುತ್ತ ವೀರಮರಣ ಹೊಂದಿರುವ ಹತ್ತು ಸೈನಿಕರ ಕುಟುಂಬಕ್ಕೆ ₹ 1 ಲಕ್ಷ ನೆರವು ನೀಡಲಾಗುವುದು ಎಂದು ಶ್ರೀಗಳು ಪ್ರಕಟಿಸಿದರು.</p>.<p>ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಎಮ್ಮೆಹಟ್ಟಿ ಕೃಷ್ಣಮೂರ್ತಿ, ಚೌಲಿಹಳ್ಳಿ ಶಶಿ ಪಾಟೀಲ್, ಜಿ.ಬಿ.ತೀರ್ಥಪ್ಪ, ಶೈಲೇಶ್ ಕುಮಾರ್, ನಿರಂಜನಮೂರ್ತಿ, ಹಂಪನೂರು ಜಗದೀಶ್, ಕೋಡಿರಂಗವ್ವನಹಳ್ಳಿ ಹನುಮಂತಪ್ಪ, ಓಬವ್ವನಾಗತಿಹಳ್ಳಿ ಮಂಜುನಾಥ್, ದೊಡ್ಡಾಲಗಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಸಿ.ಆರ್.ನಾಗರಾಜ್, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಭಾಗವಹಿಸಿದ್ದರು.</p>.<p><strong>ಚಕಿತಗೊಳಿಸಿದ ಭಕ್ತರ ಕೊಡುಗೆ</strong> </p><p>ಹುಣ್ಣಿಮೆ ಮಹೋತ್ಸವಕ್ಕೆ ಸುತ್ತಲಿನ ಗ್ರಾಮಗಳ ಭಕ್ತರು ತಮ್ಮ ಗ್ರಾಮಗಳಿಂದ ಸಂಗ್ರಹಿಸಿಕೊಂಡು ಬಂದಿದ್ದ ಕಾಣಿಕೆಯನ್ನು ಶ್ರೀಗಳಿಗೆ ಒಪ್ಪಿಸಿದರು. ಕಾರ್ಯಕರ್ತರು ಪ್ರಕಟಿಸುತ್ತಿದ್ದಂತೆ ಕಾಣಿಕೆಯನ್ನು ಶ್ರೀಗಳಿಗೆ ನೀಡಲು ಭಕ್ತರು ದುಂಬಾಲು ಬಿದ್ದರು. ಈ ಸಂದರ್ಭದಲ್ಲಿ ಚೌಲಿಹಳ್ಳಿ ಶಶಿ ಪಾಟೀಲ್ ತಮ್ಮ ಕುಟುಂಬದ ವತಿಯಿಂದ ₹ 10 ಲಕ್ಷ ಹಾಗೂ ಓಬವ್ವನಾಗತಿಹಳ್ಳಿ ಮಂಜುನಾಥ್ ₹ 4 ಲಕ್ಷ ನೀಡಿದರು. ವಿವಿಧ ಗ್ರಾಮಗಳ ಕೊಡುಗೆ ನೋಡಿ ತರಳಬಾಳು ಶ್ರೀ ಚಕಿತಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>