‘ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅಪ್ಪ–ಅಮ್ಮ ಮತ್ತು ನಾನು ಭರಮಸಾಗರ ಆಸ್ಪತ್ರೆಗೆ ತೆರಳಿದ್ದೆವು. ಅಕ್ಕ ಹಾಗೂ ತಮ್ಮ ಮಾತ್ರ ಮನೆಯಲ್ಲಿದ್ದರು. ಸಾಂಬಾರು ಮಾಡಲು ಮೊಟ್ಟೆ ತರುವಂತೆ ಅಕ್ಕ ಹೇಳಿದ್ದಳು. ಅಕ್ಕನಿಗೆ ಇಷ್ಟವಾದ ಜಿಲೇಬಿಯನ್ನು ಅಪ್ಪ ಖರೀದಿಸಿದ್ದರು. ಮನೆಗೆ ಬಂದಾಗ ಅಕ್ಕ ಇರಲಿಲ್ಲ. ನಾವೆಲ್ಲರೂ ಜಿಲೇಬಿ ತಿಂದು ಅಕ್ಕನಿಗೆ ಉಳಿಸಿದೆವು. ಬಹು ಹೊತ್ತಾದರೂ ಅಕ್ಕ ಬಾರದಿರುವುದರಿಂದ ಅಮ್ಮ, ಅಪ್ಪ ಹುಡುಕಲು ಹೊರಟರು. ಅಮ್ಮನೊಂದಿಗೆ ನಾನೂ ಹೋದೆ’ ಎಂದು ಘಟನೆಯನ್ನು ನೆನಪಿಸಿಕೊಂಡಳು.