ಚಿತ್ರದುರ್ಗ: ಐತಿಹಾಸಿಕ ಕಲ್ಲಿನಕೋಟೆಯಲ್ಲಿ ಹೆಬ್ಬಾವು ಶನಿವಾರ ಕಾಣಿಸಿಕೊಂಡಿತ್ತು. ಉರಗಪ್ರೇಮಿ ಚೇತನ್ ಮತ್ತು ತಂಡ ಇದನ್ನು ರಕ್ಷಿಸಿ ಕಾಡಿಗೆ ಬಿಟ್ಟಿದೆ.
ಕೋಟೆಯ ಬನಶಂಕರಿ ದೇಗುಲದ ಸಮೀಪ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ನವಿಲು ನುಂಗಿ ಅದನ್ನು ಜೀರ್ಣಿಸಿಕೊಳ್ಳಲಾಗದೇ ಹೊರಗೆ ಹಾಕಿತ್ತು. ಈ ಬಗ್ಗೆ ಉರಗಪ್ರೇಮಿ ಚೇನತ್ಗೆ ಮಾಹಿತಿ ನೀಡಲಾಗಿತ್ತು ಎಂದು ಕೋಟೆಯ ಪ್ರವಾಸಿ ಗೈಡ್ ಮೋಹಿದ್ದೀನ್ ಖಾನ್ ತಿಳಿಸಿದ್ದಾರೆ.