‘ಪ್ರಸ್ತುತ ಶೈಕ್ಷಣಿಕ ಸವಾಲುಗಳು’ ಕುರಿತು ಉಪನ್ಯಾಸ ನೀಡಿದ ಬೆಂಗಳೂರಿನ ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಆರ್.ಜಯಕುಮಾರಿ, ‘ಮುಂದಿನ ಪ್ರಜೆಗಳನ್ನು ಉತ್ತಮ ನಾಗರಿಕನ್ನಾಗಿಸುವ ಶಿಕ್ಷಣ ಜೀವನದ ಅವಿಭಾಜ್ಯ ಅಂಗ. ಆದರೆ, ಕೋವಿಡ್ ಎಲ್ಲರ ಶಿಕ್ಷಣ ಸ್ಥಗಿತಗೊಳಿಸಿದೆ. ಆನ್ಲೈನ್ ತರಗತಿ ಗಳು ತಾಂತ್ರಿಕ ಅಸಮರ್ಪಕತೆ, ಮೊಬೈಲ್ಗಳು ಇಲ್ಲದಿರುವುದರಿಂದ ಶೇ 40ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದ ತರಗತಿಗಳು ಆನ್ಲೈನ್ನಲ್ಲಿ ನಡೆಯುತ್ತಿವೆಯಾದರೂ ಶೇ 40 ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಲಾಗಿನ್ ಆಗುತ್ತಿಲ್ಲ. ಮಕ್ಕಳು ಹದಿಹರೆಯದ ವರಾಗಿದ್ದರಿಂದ ಮೊಬೈಲ್ನ ದುರ್ಬಳಕೆ ಹೆಚ್ಚಾಗುತ್ತಿದೆ’ ಎಂದು ವಿವರಿಸಿದರು.