ರೈತರು ಅಗತ್ಯ ದಾಖಲೆಗಳೊಂದಿಗೆ ಚಿತ್ರದುರ್ಗ, ಹೊಸದುರ್ಗ, ಚಿಕ್ಕಜಾಜೂರು ಹಾಗು ಶ್ರೀರಾಂಪುರದ ರಾಗಿ ಖರೀದಿ ಕೇಂದ್ರಗಳತ್ತ ಮುಂಜಾನೆ ಯಿಂದಲೇ ಜಮಾಯಿಸಿದರು. ಬೆಳಿಗ್ಗೆ 8ರ ಸುಮಾರಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಯಿತು. ಆದರೆ ಸರ್ವರ್ನಲ್ಲಿನ ತಾಂತ್ರಿಕ ಸಮಸ್ಯೆ ಪುನಃ ಕಂಡು ಬಂದಿದ್ದರಿಂದ ರೈತರಿಗೆ ಸಮಸ್ಯೆ ಆಗದಿರಲೆಂದು ಇಲಾಖೆಯಿಂದ ಕಳುಹಿಸಿರುವ ಪುಸ್ತಕದಲ್ಲಿ ಕೇಂದ್ರದ ಸಿಬ್ಬಂದಿ ಹೆಸರು ನೋಂದಣಿ ಮಾಡಿಕೊಂಡರು. ಈ ವೇಳೆ ಕೆಲ ರೈತರು ಆಕ್ಷೇಪ ವ್ಯಕ್ತಪಡಿಸಿದರು.