‘ಚೆಕ್ಡ್ಯಾಂ, ಗೋಕಟ್ಟೆ ಅಥವಾ ನಾಲಾಬದು ಹಾಗೂ ಕೃಷಿಹೊಂಡ ನಿರ್ಮಿಸುವುದರಿಂದ ಜಾನುವಾರು, ಕಾಡು ಪ್ರಾಣಿ ಹಾಗೂ ಪಕ್ಷಿಗಳಿಗೆ ಕುಡಿಯುವ ನೀರು ಸಿಗುತ್ತದೆ. ಅಕ್ಕ-ಪಕ್ಕದ ತೋಟಗಳು, ಬೋರ್ವೆಲ್ಗಳಲ್ಲಿ ಜಲ ಮರುಪೂರಣವಾಗುತ್ತದೆ. ಆದ್ದರಿಂದಾಗಿ ಎಲ್ಲಾ ರೈತರು, ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಮತ್ತು ಅರಣ್ಯ ಸಂಪತ್ತನ್ನು ಸಂರಕ್ಷಿಸಲು ಒತ್ತು ಕೊಡಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಸಿ.ಮಂಜು ಸಲಹೆ ನೀಡಿದ್ದಾರೆ.