ಬಸ್, ಕಾರು, ಟ್ರಾಕ್ಟರ್,ಆಟೊ, ಟಾಟಾ ಎಸ್, ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ಟಿ.ರಘುಮೂರ್ತಿ ಅಭಿಮಾನಿಗಳು ತಾಲ್ಲೂಕು ಕಚೇರಿ ಆವರಣದಲ್ಲಿ ಸೇರಿದ್ದರು. ಚಿತ್ರದುರ್ಗ, ಪಾವಗಡ, ಬೆಂಗಳೂರು ಮತ್ತು ಬಳ್ಳಾರಿ ರಸ್ತೆಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆ ತಂದಿದ್ದ ವಾಹನಗಳು ನಿಂತಿದ್ದವು. ನಗರದಲ್ಲಿ ಕಿಕ್ಕಿರಿದು ತುಂಬಿದ್ದ ಜನರಿಂದ ವಾಹನ ದಟ್ಟಣೆ ಹೆಚ್ಚಾಗಿ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.