<p><strong>ಧರ್ಮಪುರ:</strong> ಸಮೀಪದ ಈಶ್ವರಗೆರೆ ಗ್ರಾಮ ಮೂಲಸೌಕರ್ಯಗಳಿಂದ ದೂರವಿದ್ದು, ಸಮಸ್ಯೆಗಳ ಆಗರವಾಗಿದೆ.<br /> <br /> ಹಿರಿಯೂರು- ಧರ್ಮಪುರ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಈಶ್ವರಗೆರೆ ಗ್ರಾಮ ಪಂಚಾಯ್ತಿಯ ಕೇಂದ್ರವೂ ಹೌದು. ಆದರೆ, ಅಭಿವೃದ್ಧಿ ವಿಚಾರದಲ್ಲಿ ಇದು ಹಿಂದುಳಿದಿದೆ.<br /> <br /> ಈಶ್ವರಗೆರೆ ಗ್ರಾಮ 500 ಮನೆಗಳನ್ನು ಹೊಂದಿದ್ದು, ಸುಮಾರು 4 ಸಾವಿರ ಜನಸಂಖ್ಯೆ ಇದೆ. ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಜನಾಂಗದವರು ಹೆಚ್ಚಿದ್ದು, ಕೂಲಿಯೇ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದೆ. ಇಲ್ಲಿ 700 ಗುಡಿಸಲುಗಳು ಇವೆ. ಗ್ರಾಮದಲ್ಲಿ ಕೆಲವೇ ಸಿಮೆಂಟ್ ರಸ್ತೆಗಳಿವೆ.<br /> <br /> ಉಳಿದಂತೆ ಬಹುತೇಕ ರಸ್ತೆಗಳು ಹಾಳಾಗಿದ್ದು, ರಾತ್ರಿ ವೇಳೆ ಇಲ್ಲಿ ಸಂಚರಿಸುವುದೇ ಕಷ್ಟ ಎಂದು ಈಶ್ವರಗೆರೆ ಗ್ರಾಮ ಪಂಚಾಯ್ತಿ ಸದಸ್ಯ ನಾಗೇಂದ್ರಪ್ಪ ದೂರುತ್ತಾರೆ.<br /> <br /> ಈ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ಇಡೀ ಗ್ರಾಮದಲ್ಲಿ ಎರಡು ಓವರ್ಹೆಡ್ ಟ್ಯಾಂಕ್ಗಳಿವೆ. 6 ಕೈ ಪಂಪುಗಳಿದ್ದು, ಅವುಗಳಲ್ಲಿ ನೀರು ಅಲಭ್ಯ. ಇನ್ನು ಕುಡಿಯುವ ನೀರಿನಲ್ಲಿ ಯೆಥೇಚ್ಚವಾಗಿ ಪ್ಲೋರೈಡ್ ಅಂಶವಿದ್ದು ವಿವಿಧ ರೋಗಗಳಿಗೆ ಎಡೆ ಮಾಡಿಕೊಟ್ಟಿದೆ. ಅದಕ್ಕಾಗಿ ಕುಡಿಯುವ ನೀರು ಶುದ್ದೀಕರಣ ಘಟಕವನ್ನು ಸ್ಥಾಪಿಸಬೇಕು ಎಂದು ಗ್ರಾಮದ ರಂಗಸ್ವಾಮಿ ಆಗ್ರಹಿಸಿದ್ದಾರೆ.<br /> <br /> ಒಳಚರಂಡಿ: ಗ್ರಾಮದಲ್ಲಿ ಸರಿಯಾದ ರಸ್ತೆ, ಒಳಚರಂಡಿ ಇಲ್ಲ. ಮಳೆ ಬಂತೆಂದರೆ ನೀರು ರಸ್ತೆಮೇಲೆ ಹರಿಯುತ್ತದೆ. ನೀರಿನ ಪೈಪ್ಲೈನ್ ಒಡೆದು ನೀರು ಸಂಗ್ರಹವಾಗಿ ಹಂದಿಗಳ ಮತ್ತು ಸೊಳ್ಳೆಗಳ ಆಶ್ರಯ ತಾಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.<br /> <br /> ಗ್ರಾಮ ಪಂಚಾಯ್ತಿ: ಸ್ಥಳೀಯ ಆಡಳಿತದ ಜವಾಬ್ದಾರಿ ಹೊತ್ತಿರುವ ಗ್ರಾಮ ಪಂಚಾಯ್ತಿಯ ಕಟ್ಟಡವೇ ಕಳಪೆ ಕಾಮಗಾರಿಯಿಂದಾಗಿ ಬೀಳುವ ಹಂತದಲ್ಲಿದೆ ಎನ್ನುತ್ತಾರೆ ಗ್ರಾಮದ ಮಲ್ಲಿಕಾರ್ಜುನ.<br /> <br /> ಗ್ರಾಮದಲ್ಲಿ ಒಟ್ಟು ಮೂರು ಅಂಗನವಾಡಿ ಕೇಂದ್ರಗಳಿದ್ದು, ಎರಡಕ್ಕೆ ಮಾತ್ರ ಸ್ವಂತ ಕಟ್ಟಡ ಇದೆ. ಉಳಿದಂತೆ ಭೋವಿ ಕಾಲೊನಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕೊಠಡಿ ಇಲ್ಲ. <br /> <br /> ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನಿವೇಶನ ಮತ್ತು ಮನೆಗಳ ನಿರ್ಮಾಣವಾಗಬೇಕು. ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ನೇಮಕವಾಗಬೇಕು. ಕೆರೆ ಏರಿ ಮೇಲೆ ಬೆಳೆದು ನಿಂತಿರುವ ಬಳ್ಳಾರಿ ಜಾಲಿ ಪೊದೆ ತೆಗೆದು ಕೆರೆಯಲ್ಲಿನ ಹೂಳು ತೆಗೆಸಬೇಕು ಎಂದು ರಾಮಣ್ಣ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧರ್ಮಪುರ:</strong> ಸಮೀಪದ ಈಶ್ವರಗೆರೆ ಗ್ರಾಮ ಮೂಲಸೌಕರ್ಯಗಳಿಂದ ದೂರವಿದ್ದು, ಸಮಸ್ಯೆಗಳ ಆಗರವಾಗಿದೆ.<br /> <br /> ಹಿರಿಯೂರು- ಧರ್ಮಪುರ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಈಶ್ವರಗೆರೆ ಗ್ರಾಮ ಪಂಚಾಯ್ತಿಯ ಕೇಂದ್ರವೂ ಹೌದು. ಆದರೆ, ಅಭಿವೃದ್ಧಿ ವಿಚಾರದಲ್ಲಿ ಇದು ಹಿಂದುಳಿದಿದೆ.<br /> <br /> ಈಶ್ವರಗೆರೆ ಗ್ರಾಮ 500 ಮನೆಗಳನ್ನು ಹೊಂದಿದ್ದು, ಸುಮಾರು 4 ಸಾವಿರ ಜನಸಂಖ್ಯೆ ಇದೆ. ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಜನಾಂಗದವರು ಹೆಚ್ಚಿದ್ದು, ಕೂಲಿಯೇ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದೆ. ಇಲ್ಲಿ 700 ಗುಡಿಸಲುಗಳು ಇವೆ. ಗ್ರಾಮದಲ್ಲಿ ಕೆಲವೇ ಸಿಮೆಂಟ್ ರಸ್ತೆಗಳಿವೆ.<br /> <br /> ಉಳಿದಂತೆ ಬಹುತೇಕ ರಸ್ತೆಗಳು ಹಾಳಾಗಿದ್ದು, ರಾತ್ರಿ ವೇಳೆ ಇಲ್ಲಿ ಸಂಚರಿಸುವುದೇ ಕಷ್ಟ ಎಂದು ಈಶ್ವರಗೆರೆ ಗ್ರಾಮ ಪಂಚಾಯ್ತಿ ಸದಸ್ಯ ನಾಗೇಂದ್ರಪ್ಪ ದೂರುತ್ತಾರೆ.<br /> <br /> ಈ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ಇಡೀ ಗ್ರಾಮದಲ್ಲಿ ಎರಡು ಓವರ್ಹೆಡ್ ಟ್ಯಾಂಕ್ಗಳಿವೆ. 6 ಕೈ ಪಂಪುಗಳಿದ್ದು, ಅವುಗಳಲ್ಲಿ ನೀರು ಅಲಭ್ಯ. ಇನ್ನು ಕುಡಿಯುವ ನೀರಿನಲ್ಲಿ ಯೆಥೇಚ್ಚವಾಗಿ ಪ್ಲೋರೈಡ್ ಅಂಶವಿದ್ದು ವಿವಿಧ ರೋಗಗಳಿಗೆ ಎಡೆ ಮಾಡಿಕೊಟ್ಟಿದೆ. ಅದಕ್ಕಾಗಿ ಕುಡಿಯುವ ನೀರು ಶುದ್ದೀಕರಣ ಘಟಕವನ್ನು ಸ್ಥಾಪಿಸಬೇಕು ಎಂದು ಗ್ರಾಮದ ರಂಗಸ್ವಾಮಿ ಆಗ್ರಹಿಸಿದ್ದಾರೆ.<br /> <br /> ಒಳಚರಂಡಿ: ಗ್ರಾಮದಲ್ಲಿ ಸರಿಯಾದ ರಸ್ತೆ, ಒಳಚರಂಡಿ ಇಲ್ಲ. ಮಳೆ ಬಂತೆಂದರೆ ನೀರು ರಸ್ತೆಮೇಲೆ ಹರಿಯುತ್ತದೆ. ನೀರಿನ ಪೈಪ್ಲೈನ್ ಒಡೆದು ನೀರು ಸಂಗ್ರಹವಾಗಿ ಹಂದಿಗಳ ಮತ್ತು ಸೊಳ್ಳೆಗಳ ಆಶ್ರಯ ತಾಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.<br /> <br /> ಗ್ರಾಮ ಪಂಚಾಯ್ತಿ: ಸ್ಥಳೀಯ ಆಡಳಿತದ ಜವಾಬ್ದಾರಿ ಹೊತ್ತಿರುವ ಗ್ರಾಮ ಪಂಚಾಯ್ತಿಯ ಕಟ್ಟಡವೇ ಕಳಪೆ ಕಾಮಗಾರಿಯಿಂದಾಗಿ ಬೀಳುವ ಹಂತದಲ್ಲಿದೆ ಎನ್ನುತ್ತಾರೆ ಗ್ರಾಮದ ಮಲ್ಲಿಕಾರ್ಜುನ.<br /> <br /> ಗ್ರಾಮದಲ್ಲಿ ಒಟ್ಟು ಮೂರು ಅಂಗನವಾಡಿ ಕೇಂದ್ರಗಳಿದ್ದು, ಎರಡಕ್ಕೆ ಮಾತ್ರ ಸ್ವಂತ ಕಟ್ಟಡ ಇದೆ. ಉಳಿದಂತೆ ಭೋವಿ ಕಾಲೊನಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕೊಠಡಿ ಇಲ್ಲ. <br /> <br /> ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನಿವೇಶನ ಮತ್ತು ಮನೆಗಳ ನಿರ್ಮಾಣವಾಗಬೇಕು. ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ನೇಮಕವಾಗಬೇಕು. ಕೆರೆ ಏರಿ ಮೇಲೆ ಬೆಳೆದು ನಿಂತಿರುವ ಬಳ್ಳಾರಿ ಜಾಲಿ ಪೊದೆ ತೆಗೆದು ಕೆರೆಯಲ್ಲಿನ ಹೂಳು ತೆಗೆಸಬೇಕು ಎಂದು ರಾಮಣ್ಣ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>