ಸರಕಾರಿ ಶಾಲೆಗಳು ಕನ್ನಡ ಶಾಲೆಗಳಾಗಿಯೇ ಇದ್ದು, ನಾಡಿನ ಪ್ರತಿಭಾವಂತರನ್ನು ಸೃಷ್ಟಿಸಿದ ಸಂಸ್ಥೆಗಳಾಗಿವೆ. ಒಂದು ವೇಳೆ ಯಾವುದಾದರೂ ಸರಕಾರಿ ಶಾಲೆಯಲ್ಲಿ ಕೊರತೆಗಳಿದ್ದಲ್ಲಿ ಅದನ್ನು ಸರಿಪಡಿಸುವುದು ನಮ್ಮೆಲ್ಲರ ಕರ್ತವ್ಯ. ಹೊರತಾಗಿ ನಮ್ಮದೇ ಹೆಮ್ಮೆಯ ಶಾಲೆಗಳನ್ನು ಅವಮಾನಿಸುವುದು, ಅಲ್ಲಿಯ ಮಕ್ಕಳು ಮತ್ತು ಶಿಕ್ಷಕರನ್ನು ನಿಂದಿಸುವುದನ್ನು ಎಲ್ಲರೂ ಸಾರ್ವತ್ರಿಕವಾಗಿ ಖಂಡಿಸಬೇಕು. ಪರಿಷತ್ತಿಗೆ ಅಂಟಿಕೊಂಡು ಸರಕಾರದ ಅನುದಾನಗಳನ್ನೂ ಉಪಯೋಗಿಸುತ್ತಿರುವ ಕಲ್ಕೂರ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.