'ರಾಜ್ಯದ 500 ನಗರಗಳಲ್ಲಿ ಏಕ ಕಾಲಕ್ಕೆ ಸುಮಾರು 8 ಲಕ್ಷಕ್ಕೂ ಹೆಚ್ಚು ಮಂದಿ ಮಾನವ ಸರಪಳಿ ನಿರ್ಮಿಸಲಿದ್ದಾರೆ. ಕೋಮುವಾದ ಮತ್ತೆ ಮರುಕಳಿಸದಂತೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಾಜದ ಗಣ್ಯರಾದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ದಾಸ್, ಹಿರಿಯ ಚಿಂತಕ ಕೋ. ಚೆನ್ನಬಸಪ್ಪ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ಡಾ. ಜಿ. ರಾಮಕೃಷ್ಣ, ಪ್ರಕಾಶ್ ರೈ, ಚೇತನ್ ಮತ್ತಿತರರು ಈ ಮಾನವ ಸರಪಳಿಯಲ್ಲಿ ಭಾಗವಹಿಸುವರು' ಎಂದು ವಿಲ್ಫ್ರೆಡ್ ಡಿಸೋಜ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ, ಚಂದ್ರಕಲಾ ನಂದಾವರ, ವಾಸುದೇವ ಉಚ್ಚಿಲ, ಎಂ. ದೇವದಾಸ್ ಇದ್ದರು.