‘ಕೂಲಿ ಕೆಲಸಕ್ಕೆಂದು ಹಾವೇರಿಯಿಂದ ಸುಳ್ಯಕ್ಕೆ ಬಂದಿದ್ದ ನಾವು, ಗುರುವಾರ ಬೆಳಿಗ್ಗೆ ರಸ್ತೆ ಬದಿಯಲ್ಲಿ ನಿಂತಿದ್ದೆವು. ಈ ವೇಳೆ ಹುಣಸೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರನ್ನು (ಕೆಎ 16, ಎಂ 6152) ಚಾಲಕ ನಿರ್ಲಕ್ಷ್ಯದಿಂದ ಚಲಾಯಿಸಿ, ನಮ್ಮ ಜತೆಗಿದ್ದ ನಾಲ್ವರಿಗೆ ಡಿಕ್ಕಿ ಹೊಡಿಸಿದ’ ಎಂದು ಹುಲಿಗೆಪ್ಪ ಎಂಬುವರು ದೂರು ನೀಡಿದ್ದಾರೆ.