ಸುರತ್ಕಲ್ ಕೃಷ್ಣಾಪುರದ ವಿಶ್ವನಾಥ ಶೆಟ್ಟಿಗಾರ್- ಊರ್ಮಿಳಾ ದಂಪತಿಯ ಪುತ್ರ, ಕಣ್ಣು ಕಾಣಿಸದ ವಿದ್ಯಾರ್ಥಿ ಆಳ್ವಾಸ್ ಸಂಸ್ಥೆಯ ಜಯೇಶ್ ಸಿ.ಎ. ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಈ ದಂಪತಿಯ ತ್ರಿವಳಿ ಮಕ್ಕಳ ಪೈಕಿ ಜೀವನ್ ಮತ್ತು ಜಿತೇಶ್ ಅವರಿಗೆ ಕೂಡ ಕಣ್ಣು ಕಾಣಿಸುವುದಿಲ್ಲ. ಅವರೂ ಸಿ.ಎ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ.