‘ಸತ್ಯ ಹೇಳಿದರೆ ಕೋಮುವಾದ, ಹಿಂದುತ್ವ ಮಾತನಾಡಿದರೆ ಕೇಸರೀಕರಣ ಎಂದು ದೂರುವ ಬುದ್ಧಿಜೀವಿಗಳು ಸೇರಿಕೊಂಡು ಇಂದು ಶ್ರೀರಾಮ ನಂಬಿಕೆಯನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿದ್ದಾರೆ. ನಾಳೆ ದೇವತೆಗಳ ಮೇಲಿನ ನಂಬಿಕೆಯನ್ನೇ ದುರ್ಬಲಗೊಳಿಸಲು ಹೇಸುವುದಿಲ್ಲ. ಹಲವು ಮೌಢ್ಯಾಚರಣೆಗಳು ಇರುವ ಇನ್ನೊಂದು ಸಮುದಾಯದ ಬಗ್ಗೆ ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತುವವರಿಲ್ಲ. ಅದೇ ಸಮುದಾಯದ ಹೆಣ್ಮಕ್ಕಳಿಗೆ ಹಲವು ಕಟ್ಟುಪಾಡುಗಳಿದ್ದರೂ, ಹಿಂದೂಗಳ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಹೋಗಲು ಬಿಡುವಂತೆ ಒತ್ತಾಯಿಸಿ ಕೇರಳದಲ್ಲಿ ನಡೆದ ಮಹಿಳಾಗೋಡೆಯಲ್ಲಿ ವರು ಭಾಗವಹಿಸಿರುವುದು ದುರದೃಷ್ಟಕರ’ ಎಂದು ಟೀಕಿಸಿದರು.
ಆರ್ಎಸ್ಎಸ್ ಜಿಲ್ಲಾ ಸಹ ಕಾರ್ಯವಾಹ ನಾಗೇಶ್ ಕುಂಪಲ, ಜಿಲ್ಲಾ ಕಾರ್ಯವಾಹ ಪ್ರವೀಣ್ ತಲಪಾಡಿ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಉಳ್ಳಾಲ ತಾಲ್ಲೂಕು ವ್ಯವಸ್ಥಾ ಪ್ರಮುಖ್ ಅರ್ಜುನ್ ಮಾಡೂರು, ಬೌದ್ಧಿಕ್ ಪ್ರಮುಖ್ ಸಾಗರ್ ಮಾಡೂರು, ತಾಲ್ಲೂಕು ಪ್ರಚಾರ ಪ್ರಮುಖ್ ಆಶೀಕ್ ಮಾಡೂರು, ತಾಲ್ಲೂಕು ಸಂಪರ್ಕ ಪ್ರಮುಖ್ ವಿಶ್ವನಾಥ್ ಕೊಲ್ಯ, ಮಂಡಲ ಕಾರ್ಯವಾಹ ಗಣೇಶ್ ನಡಾರು, ಸಹ ಕಾರ್ಯವಾಹ ರಾಜೇಶ್ ಪಾನೀರು ಇದ್ದರು.