‘ಕೆಲವರಿಗೆ ಅಧಿಕಾರ ಇಲ್ಲದೇ ಅರೆಕ್ಷಣವೂ ಇರಲಾಗುವುದಿಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ರಘುಪತಿ ಭಟ್, ‘ಅವರು ಬಹುಶಃ ಆರೇಳು ಸಲ ಶಾಸಕರಾದವರ ಬಗ್ಗೆ, ನಾನೇ ಮುಖ್ಯಮಂತ್ರಿಯಾಗಿರಬೇಕು, ನನ್ನ ಮಗನೇ ಅಧ್ಯಕ್ಷ ಆಗಬೇಕು ಎಂದು ಹಂಬಲಿಸುವವರ ಕುರಿತು ಹಾಗೆ ಹೇಳಿರಬಹುದು’ ಎಂದರು.