ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇದ ದುರ್ಗಾ ಮೋಟಾರ್ಸ್ ವರ್ಕ್ ಶಾಪ್ನ ಚಾವಣಿಯ ಶೀಟ್ ಮೇಲೆ ಸೋಲಾರ್ ಪ್ಯಾನಲ್ನ ವಯರಿಂಗ್ ಮತ್ತು ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
‘ಮೃತರನ್ನು ಎಕ್ಕೂರು ಗುಡ್ಡೆ ನಿವಾಸಿ ವರುಣ್ (24) ಎಂದು ಗುರುತಿಸಲಾಗಿದೆ. ಸಹಕಾರ್ಮಿಕ ಮೋಹನ್ ಕುಮಾರ್ ದೂರು ನೀಡಿದ್ದಾರೆ. ಕೆಲಸ ವಹಿಸಿಕೊಂಡಿದ್ದ ಗುತ್ತಿಗೆದಾರ ರವಿ ಕಾರ್ಮಿಕರ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.