ಮೇಳದ ಸಿಬ್ಬಂದಿ ಜೀವನ್ ಕುಮಾರ್ (36) ಮೃತರು. ಮುಕ್ಕಾದ ಸತ್ಯ ಧರ್ಮ ದೇವಸ್ಥಾನದಲ್ಲಿ ಧರ್ಮಸ್ಥಳದ ಮೇಳದವರು ಉಳಿದುಕೊಂಡಿದ್ದರು. ಮೇಳದ ಪೂಜಾ ಸಾಮಾಗ್ರಿಗಳನ್ನು ತರಲು ಜೀವನ್ ಕುಮಾರ್ ರಸ್ತೆ ಆಚೆಯ ಅಂಗಡಿಗೆ ಭೇಟಿ ನೀಡಿದ್ದರು. ರಸ್ತೆ ದಾಟುವಾಗ ಸುರತ್ಕಲ್ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು. ಅವರು ಸ್ಥಳದಲ್ಲೇ ಅಸುನೀಗಿದ್ದರು.