ಅಂತಹ ಕಟು ಅಸ್ಪೃಶ್ಯತೆಯ ನಡುವೆಯೂ ಬಾಲಕ (ಸ್ವಾಮೀಜಿ) ಕಾಪಾಡಲು ಪಣ ತೊಟ್ಟ ಅವರಿಬ್ಬರೂ, ಬೊಬ್ಬೆ ಹಾಕುತ್ತಲೇ ಮನೆ ಬಳಿಕ ಓಡಿಹೋದರು. ಅದೃಷ್ಟವಶಾತ್, ಪೇಜಾವರ ಶ್ರೀಗಳ ತಂದೆ ನಾರಾಯಣ ಆಚಾರ್ಯರು ಮನೆಯಲ್ಲಿದ್ದರು. ಅವರು ಒಪ್ಪಿಗೆ ನೀಡಿದ ತಕ್ಷಣವೇ ಓಡೋಡಿ ಬಂದ ಚೋಮ ಮತ್ತು ಓಡಿ ಕೆರೆಗೆ ಧುಮುಕಿದರು. ಅಷ್ಟರಲ್ಲಾಗಲೇ ಬಾಲಕ ವೆಂಕಟ್ರಾಮ ನೀರಲ್ಲಿ ಮುಳುಗಿ, ಎದ್ದು, ಮತ್ತೆ ಮುಳುಗಿ ಆಗಿತ್ತು. ಇವರಿಬ್ಬರೂ ಬಾಲಕನನ್ನು ಎತ್ತಿ ಮೇಲಕ್ಕೆ ತಂದರು.