ಸುಬ್ರಹ್ಮಣ್ಯ: ಬೆಂಗಳೂರು-ಮಂಗಳೂರು ರೈಲು ಮಾರ್ಗದ ಶಿರಾಡಿ ಘಾಟ್ ಎಡಕುಮೇರಿ ಭಾಗದಲ್ಲಿ ಇದೇ 22ರಂದು ರೈಲು ಹಳಿ ಗಸ್ತು ನಿರತ ಸಿಬ್ಬಂದಿಗೆಇಬ್ಬರು ಅಪರಿಚಿತ ವ್ಯಕ್ತಿಗಳು ಬೆದರಿಕೆ ಒಡ್ಡಿದ ಬಳಿಕ ಅವರು ನಕ್ಸಲರು ಎಂಬ ಶಂಕೆ ಮೇರೆಗೆ ಈ ಭಾಗದ ಅರಣ್ಯಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿದೆ.
ರೈಲ್ವೆ ಕಾರ್ಮಿಕ ರಾಜು ಅವರಿಗೆ ಶಸ್ತ್ರಧಾರಿ ಅಪರಿಚಿತರಿಬ್ಬರು ಬೆದರಿಕೆ ಒಡ್ಡಿದ್ದರು. ಬಳಿಕ ತಲೆಮರೆಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಬಿಸಿಲೆ ಘಾಟ್, ಸಂಪಾಜೆ, ಸುಬ್ರಹ್ಮಣ್ಯ ಹಾಗೂ ಕೊಡಗು ಅರಣ್ಯ ಭಾಗಗಳಲ್ಲಿ ಕಾರ್ಕಳ ಎಎನ್ಎಫ್ ಪಡೆಯ ಯೋಧರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಡಿಭಾಗದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.