ಗಡಿಯಲ್ಲಿ ಕೇರಳದ ವೈದ್ಯರು:ಮಂಗಳೂರಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ದಾಖಲೆ ಪರಿಶೀಲಿಸಿ, ದೃಢೀಕರಣ ನೀಡಲು ಕಾಸರಗೋಡಿನಲ್ಲಿ ನಾಲ್ವರು ಸರ್ಕಾರಿ ವೈದ್ಯರನ್ನು ನಿಯೋಜಿಸಲಾಗಿದೆ. ತಲಪಾಡಿ ಗಡಿಯಲ್ಲೂ ಕೇರಳದ ನಾಲ್ವರು ಸರ್ಕಾರಿ ವೈದ್ಯರು ಬುಧವಾರ ಹಾಜರಿದ್ದರು. ರೋಗಿಗಳು ಕರ್ನಾಟಕ ಗಡಿ ಪ್ರವೇಶಿಸುವ ವಿಚಾರದಲ್ಲಿ ಗೊಂದಲ ಉಂಟಾದರೆ ನೆರವು ನೀಡುವುದಕ್ಕಾಗಿ ಅವರನ್ನು ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.