ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್‌ಹೋಲ್‌ಗೆ ಇಳಿದ ಬಿಜೆಪಿ ಕಾರ್ಪೋರೇಟರ್

Last Updated 25 ಜೂನ್ 2020, 11:03 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕದ್ರಿ-ಕಂಬಳ ವಾರ್ಡ್‌ನ ಪಾಲಿಕೆ ಸದಸ್ಯ ಕದ್ರಿ ಮನೋಹರ್‌ ಶೆಟ್ಟಿ ಸ್ವತಃ ಮ್ಯಾನ್‌ಹೋಲ್‌ಗೆ ಇಳಿದು, ಸಮಸ್ಯೆ ಸರಿಪಡಿಸಿದ್ದಾರೆ.

ಕದ್ರಿ-ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರು ಹರಿವಿನ ಸಮಸ್ಯೆಯಿಂದ ತಡೆ ಉಂಟಾಗಿತ್ತು. ಸಮಸ್ಯೆ ಏನೆಂದು ತಿಳಿಯಲು ಪಕ್ಕದಲ್ಲಿ ಮ್ಯಾನ್ವಲ್ ಚೇಂಬರ್ ಇದ್ದರೂ ಅಲ್ಲಿ ಯಂತ್ರ ಇಳಿಸಲು ಯಾರೂ ಒಪ್ಪಲಿಲ್ಲ. ಕೊನೆಗೇ ಮನೋಹರ್ ಶೆಟ್ಟಿ ಅವರೇ ಮ್ಯಾನ್‌ಹೋಲ್‌ಗೆ ಇಳಿದು, ಸಮಸ್ಯೆ ಏನೆಂದು ಕಾರ್ಮಿಕರಿಗೆ ವಿವರಿಸಿದರು.

ಕಳೆದ ವರ್ಷದ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಯಗಳಿಸಿರುವ ಕದ್ರಿ ಮನೋಹರ್‌ ಶೆಟ್ಟಿ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT