ಶಾಸಕ ಹರೀಶ್ ಪೂಂಜ ಮಾತನಾಡಿ, ‘ತಾಲ್ಲೂಕು ಸಮುದಾಯ ಆಸ್ಪತ್ರೆಗೆ 50 ಬೆಡ್ಗಳ ಅವಶ್ಯಕತೆ ಇದೆ. ಅಲ್ಲದೆ, ಲಸಿಕೆ ಕೊರತೆಯಿದ್ದು, ಜಿಲ್ಲಾಡಳಿತ ಸ್ಪಂದಿಸಬೇಕು. ವೆಂಟಿಲೇಟರ್ ಇರುವ ಆಂಬುಲೆನ್ಸ್ ಕೂಡ ಅಗತ್ಯವಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಉಜಿರೆ ಟಿಬಿ ಸೆಂಟರ್ ಅನ್ನು 200 ಬೆಡ್ಗಳ ಕೋವಿಡ್ ಕೇಂದ್ರವನ್ನಾಗಿ ನೀಡಿದ್ದಾರೆ. ಅಲ್ಲದೆ, ರಜತಾದ್ರಿಯನ್ನು ನೀಡಲು ಮುಂದೆ ಬಂದಿದ್ದಾರೆ’ ಎಂದರು.