<p><strong>ಮಂಗಳೂರು:</strong> ಕೋವಿಡ್–19 ನೆಗೆಟಿವ್ ಪ್ರಮಾಣಪತ್ರಗಳ ನಿಖರತೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಶ್ನಿಸಿದ್ದರಿಂದ, ಇಲ್ಲಿಂದ ದುಬೈಗೆ ತೆರಳಬೇಕಿದ್ದ 6 ಮಂದಿ ಭಟ್ಕಳದ ನಿವಾಸಿಗಳ ಪ್ರಯಾಣ ರದ್ದಾಗಿದೆ.</p>.<p>ದುಬೈನಲ್ಲಿ ಕೆಲಸಕ್ಕೆ ತೆರಳಲು ಕೋವಿಡ್–19 ನೆಗೆಟಿವ್ ಪ್ರಮಾಣಪತ್ರದೊಂದಿಗೆ ಇದೇ 1 ರಂದು ನಗರದ ವಿಮಾನ ನಿಲ್ದಾಣಕ್ಕೆ ಭಟ್ಕಳದ ಆರು ಜನರು ಬಂದಿದ್ದರು. ಆದರೆ, ಅವರ ಕೋವಿಡ್–19 ಪರೀಕ್ಷಾ ವರದಿ ಕೋವಿಡ್ ವಾರ್ ಆ್ಯಪ್ನಲ್ಲಿ ದಾಖಲಾಗದೇ ಇರುವುದರಿಂದ, ಈ ಪ್ರಮಾಣಪತ್ರಗಳು ಅಧಿಕೃತವಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಅವರಿಗೆ ಪ್ರಯಾಣ ಬೆಳೆಸಲು ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.</p>.<p>ಕೋವಿಡ್–19 ನೆಗೆಟಿವ್ ಪ್ರಮಾಣಪತ್ರ ಇದ್ದವರಿಗೆ ಮಾತ್ರ ದುಬೈಗೆ ಮರಳಲು ಅಲ್ಲಿನ ಆಡಳಿತ ಅವಕಾಶ ನೀಡಿದೆ. ಅಲ್ಲದೇ ದುಬೈ ತಲುಪಿದ ನಂತರ ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.</p>.<p>‘ಇದರಲ್ಲಿ ನಮ್ಮ ತಪ್ಪಿಲ್ಲ. ಅಧಿಕೃತ ಪ್ರಮಾಣಪತ್ರದೊಂದಿಗೆ ನಾವು ವಿಮಾನ ನಿಲ್ದಾಣಕ್ಕೆ ಬಂದಿದ್ದೇವು. ಆದರೆ, ಅಧಿಕಾರಿಗಳು ನಮಗೆ ವಿಮಾನ ಏರಲು ಅವಕಾಶ ನೀಡಲಿಲ್ಲ. ವಿಮಾನದ ಟಿಕೆಟ್ಗಾಗಿ ₹9 ಸಾವಿರ ಖರ್ಚು ಮಾಡಿದ್ದೇವೆ’ ಎಂದು ದುಬೈಗೆ ತೆರಳುತ್ತಿದ್ದ ಭಟ್ಕಳದ ಇಸ್ಮಾಯಿಲ್ ನಗರ್ ತಿಳಿಸಿದ್ದಾರೆ.</p>.<p>ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹರಿಸಲಾಗಿದ್ದು, ಐಸಿಎಂಆರ್ ಪೋರ್ಟಲ್ನ ಮಾಹಿತಿಯನ್ನೇ ವಿಮಾನ ನಿಲ್ದಾಣದ ಅಧಿಕಾರಿಗಳು ಅಧಿಕೃತ ಎಂದು ಪರಿಗಣಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕೋವಿಡ್–19 ನೆಗೆಟಿವ್ ಪ್ರಮಾಣಪತ್ರಗಳ ನಿಖರತೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಶ್ನಿಸಿದ್ದರಿಂದ, ಇಲ್ಲಿಂದ ದುಬೈಗೆ ತೆರಳಬೇಕಿದ್ದ 6 ಮಂದಿ ಭಟ್ಕಳದ ನಿವಾಸಿಗಳ ಪ್ರಯಾಣ ರದ್ದಾಗಿದೆ.</p>.<p>ದುಬೈನಲ್ಲಿ ಕೆಲಸಕ್ಕೆ ತೆರಳಲು ಕೋವಿಡ್–19 ನೆಗೆಟಿವ್ ಪ್ರಮಾಣಪತ್ರದೊಂದಿಗೆ ಇದೇ 1 ರಂದು ನಗರದ ವಿಮಾನ ನಿಲ್ದಾಣಕ್ಕೆ ಭಟ್ಕಳದ ಆರು ಜನರು ಬಂದಿದ್ದರು. ಆದರೆ, ಅವರ ಕೋವಿಡ್–19 ಪರೀಕ್ಷಾ ವರದಿ ಕೋವಿಡ್ ವಾರ್ ಆ್ಯಪ್ನಲ್ಲಿ ದಾಖಲಾಗದೇ ಇರುವುದರಿಂದ, ಈ ಪ್ರಮಾಣಪತ್ರಗಳು ಅಧಿಕೃತವಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಅವರಿಗೆ ಪ್ರಯಾಣ ಬೆಳೆಸಲು ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.</p>.<p>ಕೋವಿಡ್–19 ನೆಗೆಟಿವ್ ಪ್ರಮಾಣಪತ್ರ ಇದ್ದವರಿಗೆ ಮಾತ್ರ ದುಬೈಗೆ ಮರಳಲು ಅಲ್ಲಿನ ಆಡಳಿತ ಅವಕಾಶ ನೀಡಿದೆ. ಅಲ್ಲದೇ ದುಬೈ ತಲುಪಿದ ನಂತರ ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.</p>.<p>‘ಇದರಲ್ಲಿ ನಮ್ಮ ತಪ್ಪಿಲ್ಲ. ಅಧಿಕೃತ ಪ್ರಮಾಣಪತ್ರದೊಂದಿಗೆ ನಾವು ವಿಮಾನ ನಿಲ್ದಾಣಕ್ಕೆ ಬಂದಿದ್ದೇವು. ಆದರೆ, ಅಧಿಕಾರಿಗಳು ನಮಗೆ ವಿಮಾನ ಏರಲು ಅವಕಾಶ ನೀಡಲಿಲ್ಲ. ವಿಮಾನದ ಟಿಕೆಟ್ಗಾಗಿ ₹9 ಸಾವಿರ ಖರ್ಚು ಮಾಡಿದ್ದೇವೆ’ ಎಂದು ದುಬೈಗೆ ತೆರಳುತ್ತಿದ್ದ ಭಟ್ಕಳದ ಇಸ್ಮಾಯಿಲ್ ನಗರ್ ತಿಳಿಸಿದ್ದಾರೆ.</p>.<p>ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹರಿಸಲಾಗಿದ್ದು, ಐಸಿಎಂಆರ್ ಪೋರ್ಟಲ್ನ ಮಾಹಿತಿಯನ್ನೇ ವಿಮಾನ ನಿಲ್ದಾಣದ ಅಧಿಕಾರಿಗಳು ಅಧಿಕೃತ ಎಂದು ಪರಿಗಣಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>