‘ವ್ಯಸನಿ ಮಹಿಳೆಗೆ ಚಿಕಿತ್ಸೆ’: ಅಪಹರಿಸಿಕೊಂಡು ಬಂದ ಬಾಲಕನನ್ನು ಪುತ್ತೂರು ತಾಲ್ಲೂಕಿನ ಬಲ್ನಾಡು ಗ್ರಾಮದ ಚನಿಲ ನಿವಾಸಿ ಕೂಲಿ ಕಾರ್ಮಿಕರ ಪೂರೈಕೆಯ ಗುತ್ತಿಗೆದಾರ ಮಂಜುನಾಥ್ ರೈ ಎಂಬವರ ಮನೆಯಲ್ಲಿ ಇರಿಸಿ ಹೋಗಿದ್ದ ಆರೋಪಿ ಶಿಲ್ಪ , ಕೃತ್ಯ ಬಹಿರಂಗದ ಬಳಿಕ ಅನಾರೋಗ್ಯದ ಕಾರಣದಿಂದಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಇದೀಗ ಆಕೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ. ಆದರೆ ಮಾದಕ ದ್ರವ್ಯ ವ್ಯಸನಿಯಾಗಿರುವ ಆಕೆ ವಿಚಾರಣೆಗೊಳಪಡಿಸುವ ಸ್ಥಿತಿಯಲ್ಲಿರದ ಕಾರಣ ಪೊಲೀಸರು ಆಕೆಯನ್ನು ಬಂಧಿಸಲು ಮುಂದಾಗಿಲ್ಲ ಎಂದು ತಿಳಿದು ಬಂದಿದೆ.