ನಗರ ವ್ಯಾಪ್ತಿಯಲ್ಲಿದ್ದ ಅಂಗವಿಕಲರಿಗೆ ಈ ಹಿಂದೆ ₹5,000ವರೆಗೆ ಸಹಾಯಧನ ನೀಡಲಾಗುತ್ತಿತ್ತು. ಈಗ ಅದನ್ನು ಕಡಿತಗೊಳಿಸಿ ₹1,600 ನೀಡಲಾಗುತ್ತಿದೆ. ಪತಿಯ ತೆರಿಗೆ ಬಾಕಿ ಇದ್ದರೆ, ಅಂಗವಿಕಲ ಪತ್ನಿ, ಆ ತೆರಿಗೆ ಪಾವತಿಸಿ ಸಹಾಯಧನ ಪಡೆದುಕೊಳ್ಳಲು ಬರಬೇಕು ಎಂದು ಒತ್ತಾಯ ಮಾಡಲಾಗುತ್ತಿದ್ದು, ಇದು ಸರಿಯಲ್ಲ. ಅಂಗವಿಕಲ ವ್ಯಕ್ತಿಗೆ ಯಾವುದೇ ವೆಚ್ಚಬಾರದಂತೆ ಪರಿಹಾರ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಜಗದೀಶ್ ಒತ್ತಾಯಿಸಿದರು.