ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ನಡೆದ ನಾಡಗೀತೆ ಸ್ಪರ್ಧೆಯಲ್ಲಿ ಎಂಎಸ್ಸಿಎಚ್ಎಸ್ನ ಅನ್ವಿತಾ ಪ್ರಥಮ ಬಹುಮಾನ ಗಳಿಸಿದರೆ, ಪೆರಡಾಲ ಎನ್ಎಚ್ಎಸ್ನ ಕೃಪಾ ರೈ ಎಂ ದ್ವಿತೀಯರಾದರು. ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಸ್ವರ್ಗದ ಎಸ್ವಿಎ ಶಾಲೆ ವಿದ್ಯಾರ್ಥಿನಿ ಧನ್ವಿ ವಿ.ಎಸ್ ಪ್ರಥಮ, ಕುಂಟಾರು ಎಯುಪಿ ಶಾಲೆಯ ಆಶಿಕಾ ರಾವ್ ದ್ವಿತೀಯ ಸ್ಥಾನ ಗಳಿಸಿದರು. ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಸ್ವರ್ಗದ ಎಸ್ವಿಎ ಶಾಲೆಯ ರೇಷ್ಮಾ ಬಿ ಪ್ರಥಮ, ಕುಂಟಿಕಾನದ ಎಎಸ್ಬಿಎಸ್ ಶಾಲೆಯ ಭೂಮಿಕಾ ಆರ್.ಕೆ ದ್ವಿತೀಯ ಬಹುಮಾನ ಗಳಿಸಿದರು.