ಶುಕ್ರವಾರ ಮಧ್ಯಾಹ್ನ ಗುರುಪುರ ಭಾಗದಲ್ಲಿ ಜೋರಾಗಿ ಮಳೆ ಬೀಳುತ್ತಿತ್ತು. ಆಗ ಮನೆಯ ಪಕ್ಕದ ತೋಡಿನಲ್ಲಿ ಸಿಲುಕಿಕೊಂಡಿದ್ದ ಕಸಕಡ್ಡಿಯನ್ನು ತೆರವು ಮಾಡುವ ಕೆಲಸದಲ್ಲಿ ನಾರಾಯಣ ನಾಯ್ಕ ನಿರತರಾಗಿದ್ದರು. ಅವರದ್ದೇ ಮನೆಗೆ ನಿರ್ಮಿಸಿದ್ದ ಮುರ ಕಲ್ಲಿನ ಕಾಂಪೌಂಡ್ ಕುಸಿದು ಮೈಮೇಲೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮೃತಪಟ್ಟಿದ್ದರು.