<p><strong>ಮೂಡುಬಿದಿರೆ: </strong>ಉತ್ತಮ ಆರೋಗ್ಯಕ್ಕಾಗಿ ಜೀವನದಲ್ಲಿ ಪಂಚಸೂತ್ರವನ್ನು ಪಾಲಿಸಬೇಕು ಎಂದು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ ಹೇಳಿದರು.</p>.<p>ತಾಲ್ಲೂಕಿನ ಮರಿಯಾಡಿ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಡೆಂಗಿ ನಿರ್ಮೂಲನಾ ಸಪ್ತಾಹದ ಅಂಗವಾಗಿ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪೌಷ್ಟಿಕ ಆಹಾರ,ಶುದ್ಧ ನೀರು, ಮಾಲಿನ್ಯ ರಹಿತ ಪರಿಸರ, ಆರೋಗ್ಯಕರ ಹವ್ಯಾಸ, ವೈಯಕ್ತಿಕ ಸ್ವಚ್ಛತೆಯು ಬದುಕಿನಲ್ಲಿ ಅನುಸರಿಸಬೇಕಾದ ಪಂಚಸೂತ್ರಗಳು’ ಎಂದ ಅವರು, ‘ನಾವು ನಿರ್ಲಕ್ಷ್ಯ ವಹಿಸಿದರೆ, ಮೂರು ತಿಂಗಳು ಬದುಕುವ ಸೊಳ್ಳೆಗಳು ನೂರು ವರ್ಷ ಬದುಕುವ ಮನುಷ್ಯರನ್ನು ಸಾಯಿಸಬಲ್ಲವು’ ಎಂದು ಎಚ್ಚರಿಸಿದರು.</p>.<p>ಮೂಡುಬಿದಿರೆ ಪುರಸಭೆ ಸದಸ್ಯೆ ಮಮತಾ ಆನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಭಾಸ್ಕರ ಪಾಲ್ತಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡುಬಿದಿರೆ: </strong>ಉತ್ತಮ ಆರೋಗ್ಯಕ್ಕಾಗಿ ಜೀವನದಲ್ಲಿ ಪಂಚಸೂತ್ರವನ್ನು ಪಾಲಿಸಬೇಕು ಎಂದು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ ಹೇಳಿದರು.</p>.<p>ತಾಲ್ಲೂಕಿನ ಮರಿಯಾಡಿ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಡೆಂಗಿ ನಿರ್ಮೂಲನಾ ಸಪ್ತಾಹದ ಅಂಗವಾಗಿ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪೌಷ್ಟಿಕ ಆಹಾರ,ಶುದ್ಧ ನೀರು, ಮಾಲಿನ್ಯ ರಹಿತ ಪರಿಸರ, ಆರೋಗ್ಯಕರ ಹವ್ಯಾಸ, ವೈಯಕ್ತಿಕ ಸ್ವಚ್ಛತೆಯು ಬದುಕಿನಲ್ಲಿ ಅನುಸರಿಸಬೇಕಾದ ಪಂಚಸೂತ್ರಗಳು’ ಎಂದ ಅವರು, ‘ನಾವು ನಿರ್ಲಕ್ಷ್ಯ ವಹಿಸಿದರೆ, ಮೂರು ತಿಂಗಳು ಬದುಕುವ ಸೊಳ್ಳೆಗಳು ನೂರು ವರ್ಷ ಬದುಕುವ ಮನುಷ್ಯರನ್ನು ಸಾಯಿಸಬಲ್ಲವು’ ಎಂದು ಎಚ್ಚರಿಸಿದರು.</p>.<p>ಮೂಡುಬಿದಿರೆ ಪುರಸಭೆ ಸದಸ್ಯೆ ಮಮತಾ ಆನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಭಾಸ್ಕರ ಪಾಲ್ತಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>