<p>ಮುಡಿಪು: ಹಣ ಗಳಿಕೆ, ಐಷಾರಾಮಿ ಬದುಕಿನಿಂದ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಉದ್ದೇಶಿತ ಗುರಿ, ಪರಿಶ್ರಮದೊಂದಿಗೆ ಮುನ್ನಡೆದು ನೆಮ್ಮದಿ, ಸಂತೋಷ ಹಾಗೂ ಸಂತೃಪ್ತ ಜೀವನ ನಮ್ಮದಾದರೆ ಅದು ಬದುಕಿನ ನಿಜವಾದ ಯಶಸ್ಸು ಎಂದು <a href="">ದಕ್ಷಿಣ ಕನ್ನಡ ಜಿಲ್ಲಾಧಿಕಾರಿ </a><a href="">ಮು</a>ಲ್ಲೈ ಮುಗಿಲನ್ ಹೇಳಿದರು.</p>.<p>ಮುಡಿಪುವಿನ ಜವಹಾರ್ ನವೋದಯ ಕೇಂದ್ರೀಯ ವಿದ್ಯಾಲಯದ 23ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ವಿದ್ಯಾಕೇಂದ್ರಗಳು ವಿದ್ಯಾರ್ಥಿಗಳನ್ನು ಹೊರ ತರುವ ಕಾರ್ಖಾನೆಗಳಾಗದೆ ಅವರ ಬದುಕನ್ನು ರೂಪಿಸುವ ಕೇಂದ್ರಗಳಾಗಬೇಕು. ಮುಡಿಪುವಿನ ನವೋದಯ ವಿದ್ಯಾಲಯವು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಬದುಕಿಗೆ ಪ್ರೇರಪಣೆ ಒದಗಿಸುವ, ಶೈಕ್ಷಣಿಕ ಚಟುವಟಿಕೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.</p>.<p>ಮುಡಿಪುವಿನ ಜವಹಾರ್ ನವೋದಯ ವಿದ್ಯಾಲಯವು ಶೈಕ್ಷಣಿಕ ಸಾಧನೆಯ ಮೂಲಕ ಫೈವ್ ಸ್ಟಾರ್ ಮಾನ್ಯತೆ ದೊರಕಿದ್ದು, ಜಿಲ್ಲಾಧಿಕಾರಿ ಈ ಕುರಿರು ಘೋಷಣೆ ಮಾಡಿದರು.</p>.<p>ಜವಹಾರ್ ನವೋದಯ ವಿದ್ಯಾಲಯದ ಹೈದಾರಾಬಾದ್ ವಲಯದ ಉಪ ಆಯುಕ್ತ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.</p>.<p>ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳೆಂದರೆ ಕೇವಲ ಓದು ಮಾತ್ರವಲ್ಲ. ಅದರೊಂದಿಗೆ ಕ್ರೀಡೆ, ಸಾಂಸ್ಕೃತಿಕ ರಂಗ, ಎನ್ಸಿಸಿ ಸೇರಿದಂತೆ ಅವರ ಬದುಕಿಗೆ ಪೂರಕವಾಗುವ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವಂತಾಗಬೇಕು. ನವೋದಯ ವಿದ್ಯಾಲಯದಲ್ಲಿ ಇಂಥ ಅವಕಾಶಗಳಿದ್ದು, ರಾಷ್ಟ್ರಮಟ್ಟದಲ್ಲಿ ನವೋದಯ ವಿದ್ಯಾಲಯವು ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.</p>.<p>ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.</p>.<p>ವಿಎಂಸಿ ಸದಸ್ಯರಾದ <a href="">ಪ್ರೊ.ಜಗದೀಶ್</a> ಪ್ರಸಾದ್, ಕೃಷ್ಣಪ್ರಸಾದ್ ಅವರನ್ನು ಗೌರವಿಸಲಾಯಿತು.</p>.<p>ಪ್ರಾಂಶುಪಾಲ <a href="">ಪಿ.ರಾಜೇಶ್</a> ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಉಪಪ್ರಾಂಶುಪಾಲರಾದ ರೇಖಾ ಅಶೋಕ್ ಸ್ವಾಗತಿಸಿದರು. ಕೆ.ಪಿ.ರಾಘವನ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಡಿಪು: ಹಣ ಗಳಿಕೆ, ಐಷಾರಾಮಿ ಬದುಕಿನಿಂದ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಉದ್ದೇಶಿತ ಗುರಿ, ಪರಿಶ್ರಮದೊಂದಿಗೆ ಮುನ್ನಡೆದು ನೆಮ್ಮದಿ, ಸಂತೋಷ ಹಾಗೂ ಸಂತೃಪ್ತ ಜೀವನ ನಮ್ಮದಾದರೆ ಅದು ಬದುಕಿನ ನಿಜವಾದ ಯಶಸ್ಸು ಎಂದು <a href="">ದಕ್ಷಿಣ ಕನ್ನಡ ಜಿಲ್ಲಾಧಿಕಾರಿ </a><a href="">ಮು</a>ಲ್ಲೈ ಮುಗಿಲನ್ ಹೇಳಿದರು.</p>.<p>ಮುಡಿಪುವಿನ ಜವಹಾರ್ ನವೋದಯ ಕೇಂದ್ರೀಯ ವಿದ್ಯಾಲಯದ 23ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ವಿದ್ಯಾಕೇಂದ್ರಗಳು ವಿದ್ಯಾರ್ಥಿಗಳನ್ನು ಹೊರ ತರುವ ಕಾರ್ಖಾನೆಗಳಾಗದೆ ಅವರ ಬದುಕನ್ನು ರೂಪಿಸುವ ಕೇಂದ್ರಗಳಾಗಬೇಕು. ಮುಡಿಪುವಿನ ನವೋದಯ ವಿದ್ಯಾಲಯವು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಬದುಕಿಗೆ ಪ್ರೇರಪಣೆ ಒದಗಿಸುವ, ಶೈಕ್ಷಣಿಕ ಚಟುವಟಿಕೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.</p>.<p>ಮುಡಿಪುವಿನ ಜವಹಾರ್ ನವೋದಯ ವಿದ್ಯಾಲಯವು ಶೈಕ್ಷಣಿಕ ಸಾಧನೆಯ ಮೂಲಕ ಫೈವ್ ಸ್ಟಾರ್ ಮಾನ್ಯತೆ ದೊರಕಿದ್ದು, ಜಿಲ್ಲಾಧಿಕಾರಿ ಈ ಕುರಿರು ಘೋಷಣೆ ಮಾಡಿದರು.</p>.<p>ಜವಹಾರ್ ನವೋದಯ ವಿದ್ಯಾಲಯದ ಹೈದಾರಾಬಾದ್ ವಲಯದ ಉಪ ಆಯುಕ್ತ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.</p>.<p>ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳೆಂದರೆ ಕೇವಲ ಓದು ಮಾತ್ರವಲ್ಲ. ಅದರೊಂದಿಗೆ ಕ್ರೀಡೆ, ಸಾಂಸ್ಕೃತಿಕ ರಂಗ, ಎನ್ಸಿಸಿ ಸೇರಿದಂತೆ ಅವರ ಬದುಕಿಗೆ ಪೂರಕವಾಗುವ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವಂತಾಗಬೇಕು. ನವೋದಯ ವಿದ್ಯಾಲಯದಲ್ಲಿ ಇಂಥ ಅವಕಾಶಗಳಿದ್ದು, ರಾಷ್ಟ್ರಮಟ್ಟದಲ್ಲಿ ನವೋದಯ ವಿದ್ಯಾಲಯವು ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.</p>.<p>ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.</p>.<p>ವಿಎಂಸಿ ಸದಸ್ಯರಾದ <a href="">ಪ್ರೊ.ಜಗದೀಶ್</a> ಪ್ರಸಾದ್, ಕೃಷ್ಣಪ್ರಸಾದ್ ಅವರನ್ನು ಗೌರವಿಸಲಾಯಿತು.</p>.<p>ಪ್ರಾಂಶುಪಾಲ <a href="">ಪಿ.ರಾಜೇಶ್</a> ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಉಪಪ್ರಾಂಶುಪಾಲರಾದ ರೇಖಾ ಅಶೋಕ್ ಸ್ವಾಗತಿಸಿದರು. ಕೆ.ಪಿ.ರಾಘವನ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>