<p><strong>ಉಪ್ಪಿನಂಗಡಿ: </strong>ಸೇನಾ ನಿವೃತ್ತ ಉದ್ಯೋಗಿಯಿಂದ ಆಗುತ್ತಿರುವ ಕಿರುಕುಳದಿಂದ ಕುಟುಂಬವನ್ನು ಮುಕ್ತಗೊಳಿಸಿ ಎಂದು ವಿನಂತಿಸಿ ಮಹಿಳೆಯೊಬ್ಬರು ಪುತ್ತೂರು ಡಿವೈಎಸ್ಪಿಗೆ ದೂರು ನೀಡಿದ್ದಾರೆ.</p>.<p>ಇಳಂತಿಲ ಗ್ರಾಮದ ಮಹಿಳೆ ದೂರು ನೀಡಿದ್ದು, ‘ಏಪ್ರಿಲ್ 14ರಂದು ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಗೆರೆಟೆ ಸಂಗ್ರಹಿಸಲು ಹೋಗಿದ್ದ ವೇಳೆ ಸಮೀಪದ ನಿವಾಸಿ ಸೇನಾ ನಿವೃತ್ತ ಉದ್ಯೋಗಿ ಜಯ ಪೂಜಾರಿ ಎಂಬುವರು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ, ನಿರಂತರ ಕೆಲ್ಲೆಸೆದು ಕಣ್ಣಿಗೆ ಗಾಯಗೊಳಿಸಿದ್ದಾರೆ. ಸುದೀರ್ಘ ಚಿಕಿತ್ಸೆಯ ಬಳಿಕವೂ ದೃಷ್ಟಿ ಬಂದಿಲ್ಲ. ಆರೋಪಿ ಮದ್ಯವ್ಯಸನಿಯಾಗಿದ್ದು, ರಾತ್ರಿ ವೇಳೆ ಮನೆಗೆ ಬಂದು ಟಾರ್ಚ್ ಲೈಟ್ ಹಾಕುವುದು, ಅವ್ಯಾಚ ಪದಗಳಿಂದ ಬೈಯುವುದು ಮೊದಲಾದ ಕಿರುಕುಳ ನೀಡುತ್ತಿದ್ದಾರೆ. ಕಿರುಕುಳ ನೀಡುವ ಕೃತ್ಯವನ್ನು ವಿಡಿಯೊ ಮೂಲಕ ದಾಖಲಿಸಿ ಸ್ಥಳೀಯ ಠಾಣೆಗೆ ದೂರು ನೀಡಿದ್ದರೂ ನ್ಯಾಯ ದೊರೆಯಲಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಆರೋಪಿಯ ಕಿರುಕುಳದಿಂದ ಕೃಷಿ ಮಾಡಲು ಆಗದೆ, ನಷ್ಟವಾಗಿದೆ. ಇಡೀ ಕುಟುಂಬ ಭಯದಲ್ಲಿ ಜೀವನ ನಡೆಸುವಂತಾಗಿದೆ. ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ವಿನಂತಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಪ್ಪಿನಂಗಡಿ: </strong>ಸೇನಾ ನಿವೃತ್ತ ಉದ್ಯೋಗಿಯಿಂದ ಆಗುತ್ತಿರುವ ಕಿರುಕುಳದಿಂದ ಕುಟುಂಬವನ್ನು ಮುಕ್ತಗೊಳಿಸಿ ಎಂದು ವಿನಂತಿಸಿ ಮಹಿಳೆಯೊಬ್ಬರು ಪುತ್ತೂರು ಡಿವೈಎಸ್ಪಿಗೆ ದೂರು ನೀಡಿದ್ದಾರೆ.</p>.<p>ಇಳಂತಿಲ ಗ್ರಾಮದ ಮಹಿಳೆ ದೂರು ನೀಡಿದ್ದು, ‘ಏಪ್ರಿಲ್ 14ರಂದು ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಗೆರೆಟೆ ಸಂಗ್ರಹಿಸಲು ಹೋಗಿದ್ದ ವೇಳೆ ಸಮೀಪದ ನಿವಾಸಿ ಸೇನಾ ನಿವೃತ್ತ ಉದ್ಯೋಗಿ ಜಯ ಪೂಜಾರಿ ಎಂಬುವರು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ, ನಿರಂತರ ಕೆಲ್ಲೆಸೆದು ಕಣ್ಣಿಗೆ ಗಾಯಗೊಳಿಸಿದ್ದಾರೆ. ಸುದೀರ್ಘ ಚಿಕಿತ್ಸೆಯ ಬಳಿಕವೂ ದೃಷ್ಟಿ ಬಂದಿಲ್ಲ. ಆರೋಪಿ ಮದ್ಯವ್ಯಸನಿಯಾಗಿದ್ದು, ರಾತ್ರಿ ವೇಳೆ ಮನೆಗೆ ಬಂದು ಟಾರ್ಚ್ ಲೈಟ್ ಹಾಕುವುದು, ಅವ್ಯಾಚ ಪದಗಳಿಂದ ಬೈಯುವುದು ಮೊದಲಾದ ಕಿರುಕುಳ ನೀಡುತ್ತಿದ್ದಾರೆ. ಕಿರುಕುಳ ನೀಡುವ ಕೃತ್ಯವನ್ನು ವಿಡಿಯೊ ಮೂಲಕ ದಾಖಲಿಸಿ ಸ್ಥಳೀಯ ಠಾಣೆಗೆ ದೂರು ನೀಡಿದ್ದರೂ ನ್ಯಾಯ ದೊರೆಯಲಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಆರೋಪಿಯ ಕಿರುಕುಳದಿಂದ ಕೃಷಿ ಮಾಡಲು ಆಗದೆ, ನಷ್ಟವಾಗಿದೆ. ಇಡೀ ಕುಟುಂಬ ಭಯದಲ್ಲಿ ಜೀವನ ನಡೆಸುವಂತಾಗಿದೆ. ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ವಿನಂತಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>