ಉಜಿರೆ: ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಕಬಡ್ಡಿ ಕ್ರೀಡಾಪಟುಗಳಾದ ರತನ್, ಮಿಥಿನ್ ಕುಮಾರ್ ಮತ್ತು ವರುಣ್ ಶೆಟ್ಟಿ ಅವರನ್ನು ಕಾಲೇಜಿನಲ್ಲಿ ಬೆಂಗಳೂರಿನ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಮತ್ತು ರಾಜ್ಯ ಕಬಡ್ಡಿ ತೀರ್ಪುಗಾರರ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಭಾರತೀಯ ಕ್ರೀಡಾ ಪ್ರಾಧಿಕಾರದ ಕಬಡ್ಡಿ ತರಬೇತುದಾರ ಡಾ. ಶ್ರೀಧರ್ ಕ್ರೀಡಾಪಟುಗಳನ್ನು ಸನ್ಮಾನಿಸಿದರು. ರತನ್ ಮತ್ತು ವರುಣ್ ಶೆಟ್ಟಿ ವಿಜಯಾ ಬ್ಯಾಂಕ್ನಲ್ಲಿ ನೌಕರಿಗೆ ಆಯ್ಕೆಯಾಗಿದ್ದಾರೆ. ಮಿಥಿನ್ ಕುಮಾರ್ ಪ್ರೊ–ಕಬಡ್ಡಿ ಆಟಗಾರರಾಗಿ ಆಯ್ಕೆಯಾಗಿದ್ದಾರೆ.