<p><strong>ಉಜಿರೆ</strong>: ಕಡಿರುದ್ಯಾವರ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ನೇತ್ರಾವತಿ ನದಿ ಕಿನಾರೆಯಿಂದ ಪರವಾನಗಿ ಇಲ್ಲದೆ ಹಿಟಾಚಿ ಮೂಲಕ ಟಿಪ್ಪರ್ಗೆ ಮರಳು ತುಂಬಿಸಿ ಮಾರಾಟ ಮಾಡುವ ಪ್ರಕರಣ ಪತ್ತೆಯಾಗಿದ್ದು, ಬೆಳ್ತಂಗಡಿ ಪಿಎಸ್ಐ ಆನಂದ ಎಂ.ನೇತೃತ್ವದಲ್ಲಿ ಗುರುವಾರ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.</p>.<p>ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ, ಹಿಟಾಚಿ ಅಪರೇಟರ್ ಮಹಮ್ಮದ್ ಶಮೀರುದ್ದೀನ್ನನ್ನು ವಿಚಾರಿಸಿದಾಗ ಟಿಪ್ಪರ್ ಚಾಲಕನ ಹೆಸರು ಚಾರ್ಮಾಡಿಯ ಹನೀಫ್ ಎಂದು ಮಾಹಿತಿ ನೀಡಿದ್ದಾನೆ.</p>.<p>ಅಕ್ರಮವಾಗಿ ಮರಳು ತುಂಬಿದ್ದ ₹3.5 ಲಕ್ಷ ಮೌಲ್ಯದ ಟಿಪ್ಪರ್, ₹ 2.5 ಲಕ್ಷ ಮೌಲ್ಯದ ಹಿಟಾಚಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>.<p>ಆರೋಪಿಗಳಾದ ಕಕ್ಕಿಂಜೆ ಗ್ರಾಮದ ಚಾರ್ಮಾಡಿ ನಿವಾಸಿಗಳಾದ ಮಹಮ್ಮದ್ ಶಮಿರುದ್ದೀನ್, ಎಚ್.ಹನೀಫ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.</p>.<p>ಡಿವೈಎಸ್ಪಿ ರೋಹಿಣಿ ಸಿ.ಕೆ., ಮಾರ್ಗದರ್ಶನದಲ್ಲಿ ಸಿಪಿಐ ಬಿ.ಜಿ.ಸುಬ್ಬಾಪುರಮಠ ನೇತೃತ್ವದಲ್ಲಿ ಎಸ್.ಐ.ಆನಂದ್ ಎಂ. ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಜಿರೆ</strong>: ಕಡಿರುದ್ಯಾವರ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ನೇತ್ರಾವತಿ ನದಿ ಕಿನಾರೆಯಿಂದ ಪರವಾನಗಿ ಇಲ್ಲದೆ ಹಿಟಾಚಿ ಮೂಲಕ ಟಿಪ್ಪರ್ಗೆ ಮರಳು ತುಂಬಿಸಿ ಮಾರಾಟ ಮಾಡುವ ಪ್ರಕರಣ ಪತ್ತೆಯಾಗಿದ್ದು, ಬೆಳ್ತಂಗಡಿ ಪಿಎಸ್ಐ ಆನಂದ ಎಂ.ನೇತೃತ್ವದಲ್ಲಿ ಗುರುವಾರ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.</p>.<p>ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ, ಹಿಟಾಚಿ ಅಪರೇಟರ್ ಮಹಮ್ಮದ್ ಶಮೀರುದ್ದೀನ್ನನ್ನು ವಿಚಾರಿಸಿದಾಗ ಟಿಪ್ಪರ್ ಚಾಲಕನ ಹೆಸರು ಚಾರ್ಮಾಡಿಯ ಹನೀಫ್ ಎಂದು ಮಾಹಿತಿ ನೀಡಿದ್ದಾನೆ.</p>.<p>ಅಕ್ರಮವಾಗಿ ಮರಳು ತುಂಬಿದ್ದ ₹3.5 ಲಕ್ಷ ಮೌಲ್ಯದ ಟಿಪ್ಪರ್, ₹ 2.5 ಲಕ್ಷ ಮೌಲ್ಯದ ಹಿಟಾಚಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.</p>.<p>ಆರೋಪಿಗಳಾದ ಕಕ್ಕಿಂಜೆ ಗ್ರಾಮದ ಚಾರ್ಮಾಡಿ ನಿವಾಸಿಗಳಾದ ಮಹಮ್ಮದ್ ಶಮಿರುದ್ದೀನ್, ಎಚ್.ಹನೀಫ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.</p>.<p>ಡಿವೈಎಸ್ಪಿ ರೋಹಿಣಿ ಸಿ.ಕೆ., ಮಾರ್ಗದರ್ಶನದಲ್ಲಿ ಸಿಪಿಐ ಬಿ.ಜಿ.ಸುಬ್ಬಾಪುರಮಠ ನೇತೃತ್ವದಲ್ಲಿ ಎಸ್.ಐ.ಆನಂದ್ ಎಂ. ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>