<p><strong>ಮಂಗಳೂರು:</strong> ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಮಾಸ್ಕ್ ಮೂಲಕ ಕನ್ನಡ ಜಾಗೃತಿ ಮೂಡಿಸುವ ವಿನೂತನ ಹೆಜ್ಜೆ ಇಟ್ಟಿದೆ.</p>.<p>ನಗರದಲ್ಲಿ ಗುರುವಾರ ‘ಮಾಸ್ಕ್ ದಿನ’ ಹಮ್ಮಿಕೊಂಡಿದ್ದು, ಬಿಳಿ ಬಟ್ಟೆಯಲ್ಲಿ ‘ಕ’ ಅಕ್ಷರ ಮುದ್ರಿಸಿದ ಮಾಸ್ಕ್ಗಳನ್ನು ವಿತರಿಸಲಾಯಿತು.</p>.<p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ‘ವಿವಿಧ ಸಂದರ್ಭಗಳಲ್ಲಿ ಸಂಭಾಷಣೆ ನಡೆಸುವಾಗ ಅಂಗವಸ್ತ್ರ ಬಳಸುವ ಕ್ರಮ ಹಿಂದಿನಿಂದಲೂ ಇದೆ. ಇದೇ ‘ಮಾಸ್ಕ್’ ರೂಪದಲ್ಲಿ ಬಂದಿದೆ’ ಎಂದರು.</p>.<p>‘ಕೊರೊನಾ ಓಡಿಸುವ ಜೊತೆಗೆ ನಮ್ಮ ನೆಲದ ಕನ್ನಡ ಸಂಸ್ಕೃತಿ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಅದಕ್ಕಾಗಿ ‘ಕ’ ಅಕ್ಷರ ಮುದ್ರಿಸಿದ ಮಾಸ್ಕ್ ವಿತರಣೆ ಹಾಗೂ ಬಳಕೆಯನ್ನು ಉತ್ತೇಜಿಸಿದ್ದೇವೆ’ ಎಂದು ಅವರು ವಿವರಿಸಿದರು.</p>.<p>‘ವ್ಯಕ್ತಿ ಜೊತೆ ರಾಜ್ಯ, ದೇಶದ ಸ್ವಾಸ್ಥ್ಯ ರಕ್ಷಣೆಯೂ ನಮ್ಮ ಮೇಲಿದೆ. ನಾವೆಲ್ಲ ಮಾಸ್ಕ್ ಧರಿಸೋಣ’ ಎಂದರು.</p>.<p>ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಪ್ರಸಂಗ ಕರ್ತ ಪೊಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಮಾಸ್ಕ್ ಮೂಲಕ ಕನ್ನಡ ಜಾಗೃತಿ ಮೂಡಿಸುವ ವಿನೂತನ ಹೆಜ್ಜೆ ಇಟ್ಟಿದೆ.</p>.<p>ನಗರದಲ್ಲಿ ಗುರುವಾರ ‘ಮಾಸ್ಕ್ ದಿನ’ ಹಮ್ಮಿಕೊಂಡಿದ್ದು, ಬಿಳಿ ಬಟ್ಟೆಯಲ್ಲಿ ‘ಕ’ ಅಕ್ಷರ ಮುದ್ರಿಸಿದ ಮಾಸ್ಕ್ಗಳನ್ನು ವಿತರಿಸಲಾಯಿತು.</p>.<p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ‘ವಿವಿಧ ಸಂದರ್ಭಗಳಲ್ಲಿ ಸಂಭಾಷಣೆ ನಡೆಸುವಾಗ ಅಂಗವಸ್ತ್ರ ಬಳಸುವ ಕ್ರಮ ಹಿಂದಿನಿಂದಲೂ ಇದೆ. ಇದೇ ‘ಮಾಸ್ಕ್’ ರೂಪದಲ್ಲಿ ಬಂದಿದೆ’ ಎಂದರು.</p>.<p>‘ಕೊರೊನಾ ಓಡಿಸುವ ಜೊತೆಗೆ ನಮ್ಮ ನೆಲದ ಕನ್ನಡ ಸಂಸ್ಕೃತಿ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಅದಕ್ಕಾಗಿ ‘ಕ’ ಅಕ್ಷರ ಮುದ್ರಿಸಿದ ಮಾಸ್ಕ್ ವಿತರಣೆ ಹಾಗೂ ಬಳಕೆಯನ್ನು ಉತ್ತೇಜಿಸಿದ್ದೇವೆ’ ಎಂದು ಅವರು ವಿವರಿಸಿದರು.</p>.<p>‘ವ್ಯಕ್ತಿ ಜೊತೆ ರಾಜ್ಯ, ದೇಶದ ಸ್ವಾಸ್ಥ್ಯ ರಕ್ಷಣೆಯೂ ನಮ್ಮ ಮೇಲಿದೆ. ನಾವೆಲ್ಲ ಮಾಸ್ಕ್ ಧರಿಸೋಣ’ ಎಂದರು.</p>.<p>ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಪ್ರಸಂಗ ಕರ್ತ ಪೊಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>