ಕುಕ್ಕುದಕಟ್ಟೆಯ ಹೋಟೆಲ್ ಮಾಲೀಕರಾಗಿದ್ದ ಗೌರಮ್ಮ ಮುಂದಾಳತ್ವದಲ್ಲಿ ಮೊದಲ ಎರಡು ವರ್ಷ ಶ್ರೀದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನಗೊಂಡಿತ್ತು. ಬಳಿಕ ಆರ್ಥಿಕ ಅಡಚಣೆ ಕಾರಣ ಅವರು ಯಕ್ಷಗಾನ ಪ್ರದರ್ಶನ ಮುಂದಾಳತ್ವದಿಂದ ಹಿಂದೆ ಸರಿದರು. ಆ ಹೊತ್ತಿಗೆ ಸ್ಥಳೀಯ ಹೊಯಿಗೆ ಕೂಲಿ ಕಸುಬುದಾರರಾದ ಭಾಸ್ಕರ ಮುಂಡ, ಜಾರಪ್ಪ ಪೂಜಾರಿ, ಹಸನ್ ಬ್ಯಾರಿ, ಕೊರಗಪ್ಪ ಸಫಲಿಗ, ನಾರಾಯಣ ಸಫಲಿಗ, ಹರಿಯಪ್ಪ ಪೂಜಾರಿ, ದೇವಕಿ ಬಿ. ಶೆಟ್ಟಿ, ಕಾಂತಪ್ಪ ಮುಂಡ, ಜಲಜಾ, ವಾಮಯ್ಯ ಪೂಜಾರಿ ಜಲ್ಲಿಗುಡ್ಡೆ, ಅಚ್ಚು ಸಲ್ದಾನ, ದೇವು ಸಫಲಿಗ, ಪದ್ಮನಾಭ ಸಫಲಿಗ, ಕುಟ್ಟಿ ಸಫಲಿಗ, ವಿಶ್ವನಾಥ ಸಫಲಿಗ, ಜಯಶೀಲ ಶೆಟ್ಟಿ, ಸ್ಟ್ಯೇನಿ ಸಲ್ಡಾನ, ಮೊಹಮ್ಮದ್ ಬ್ಯಾರಿ, ಅಂಗಡಿ ಮಹಾಬಲ ಪೂಜಾರಿ ಮೊದಲಾದವರು ಆಟ ಮುಂದುವರಿಸಲು ತೀರ್ಮಾನಿಸಿ ಮೂರನೇ ವರ್ಷವೂ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಸಿಕೊಟ್ಟರು. ಬಳಿಕ ನಡೆದುದೆಲ್ಲ ಇತಿಹಾಸ.