ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ನಿವಾಸಿಗಳಾದ ಗಂಗಮ್ಮ ಹಾಗೂ ಸಂಬಂಧಿಕರು ಕ್ಷೇತ್ರಕ್ಕೆ ಬಂದು ಹೋಟೆಲ್ನಲ್ಲಿ ಲಿ ತಿಂಡಿ ತಿನ್ನುತ್ತಿರುವ ವೇಳೆ ಕಳವು ನಡೆದಿದೆ. ಗಂಗಮ್ಮ ಅವರು ಟೇಬಲ್ ಪಕ್ಕದಲ್ಲಿ ತಮ್ಮಲ್ಲಿದ್ದ ಬ್ಯಾಗನ್ನು ಇರಿಸಿದ್ದಾರೆ. ತಿಂಡಿ ತಿಂದ ಬಳಿಕ ನೋಡಿದಾಗ ಬ್ಯಾಗ್ ಇರಲಿಲ್ಲ. ಆ ಬ್ಯಾಗ್ನಲ್ಲಿ 17 ಲಕ್ಷ ಬೆಳೆಬಾಳುವ 493 ಗ್ರಾ ಚಿನ್ನಾಭರಣ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳ್ಳ ಬ್ಯಾಗನ್ನು ಎಗರಿಸಿ ಪರಾರಿಯಾಗುವ ದೃಶ್ಯ ಹೋಟೆಲ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.