ಕುವೈತ್ನಲ್ಲಿ ಉದ್ಯಮಿಗಳಾಗಿರುವ ಮೋಹನ್ ದಾಸ್ ಕಾಮತ್, ರಾಜ್ ಭಂಡಾರಿ, ಮಾಧವ ನಾಯಕ್ ಮತ್ತು ದಿನೇಶ್ ಸುವರ್ಣ, ವಿಜಯ್ ಫರ್ನಾಂಡಿಸ್ ಮತ್ತು ಪ್ರಶಾಂತ್ ಮೊಗವೀರ ಮಹಿಳೆಯ ನೆರವಿಗೆ ಧಾವಿಸಿದ್ದರು. ಜುಲೈ ತಿಂಗಳಿನಲ್ಲಿ ಘನ ತ್ಯಾಜ್ಯ ಎಸೆಯಲು ಬಂದಾಗ ಮಾಲೀಕರ ಕಣ್ಣುತಪ್ಪಿಸಿ ಈ ತಂಡದ ನೆರವಿನೊಂದಿಗೆ ರೇಷ್ಮಾ ಅವರು ಕುವೈತ್ನ ಭಾರತೀಯ ರಾಯಭಾರ ಕಚೇರಿಗೆ ಬಂದಿದ್ದರು.