ಮಂಗಳೂರಿನ ಹುಸೈನ್ ಹಾಗೂ ರಾಜೇಶ್ ಪಾಲುದಾರಿಕೆಯಲ್ಲಿ ಈ ಅಂಗಡಿಯನ್ನು ನಡೆಸುತ್ತಿದ್ದರು. ಇವರಿಬ್ಬರೇ ಇಲ್ಲಿ ದುಡಿಯುತ್ತಿದ್ದರು. ಘಟನೆಯ ಸಂದರ್ಭ ಹುಸೈನ್ ಅಲ್ಲಿಯೇ ಇದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ತಾಗಿಕೊಂಡೇ ಟೈರ್ ಪಂಕ್ಚರ್ ಸರಿಪಡಿಸುವ ಅಂಗಡಿಯಿದ್ದು, ಅಲ್ಲಿದ್ದ ದಿನೇಶ್ ಎಂಬವರೂ ಅಪಾಯದಿಂದ ಪಾರಾಗಿದ್ದಾರೆ.