ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು: ತಹಶೀಲ್ದಾರ್ ಮೇಲೆ ಹಲ್ಲೆ, ಶಾಸಕ ಅಶ್ರಫ್ ಸೇರಿ 4 ಮಂದಿಗೆ 1ವರ್ಷ ಜೈಲು

Published 1 ನವೆಂಬರ್ 2023, 13:43 IST
Last Updated 1 ನವೆಂಬರ್ 2023, 13:43 IST
ಅಕ್ಷರ ಗಾತ್ರ

ಕಾಸರಗೋಡು: ಚುನಾವಣೆಯ ಅಹವಾಲು ಸ್ವೀಕಾರ ಸಭೆಯಲ್ಲಿ ಸಹಾಯಕ ತಹಶೀಲ್ದಾರ್‌ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಸಹಿತ 4 ಮಂದಿಗೆ ಒಂದು ವರ್ಷ, 3 ತಿಂಗಳ ಸಜೆಯನ್ನು ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯ ವಿಧಿಸಿದೆ.

ಘಟನೆ ನಡೆದಾಗ ಎ.ಕೆ.ಎಂ.ಅಶ್ರಫ್(46) ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಮಂಜೇಶ್ವರ ಪಂಚಾಯತಿ ಸದಸ್ಯರಾಗಿದ್ದ ಅಬ್ದುಲ್ಲ ಕಜೆ(58), ಬಡಾಜೆ ನಿವಾಸಿ ಬಶೀರ್ ಕನಿಲ((52), ಬಂಗ್ರ ಮಂಜೇಶ್ವರದ ಅಬ್ದುಲ್ ಖಾದರ್(62) ಇತರ ಆರೋಪಿಗಳು.

2015 ನ.25ರಂದು  ಮಂಜೇಶ್ವರ ಬ್ಲಾಕ್‌ ಪಂಚಾಯಿತಿ ಸಭಾಂಗಣದಲ್ಲಿ  ಘಟನೆ ನಡೆದಿತ್ತು.

‘ಜಿಲ್ಲಾ ಪ್ರಥಮ ದರ್ಜೆ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲಿನ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವೆ’ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT