<p><strong>ಮಂಗಳೂರು:</strong> ಇಲ್ಲಿಯ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ನ ರಂಗ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ಇದೇ 14ರಿಂದ 17ರ ವರೆಗೆ ಬಹುಭಾಷಾ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ.</p><p>ಮೊದಲ ದಿನ ಮೈಸೂರಿನ ಅನುಭೂತಿ ತಂಡದಿಂದ, ಶ್ರೀ ವಿದ್ಯಾ ಅವರು ಅಭಿನಯಿಸುವ ದೀಪಧಾರಿಣಿ ಎಂಬ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕೋತ್ಸವದಲ್ಲಿ ಕನ್ನಡ, ಕೊಂಕಣಿ, ಇಂಗ್ಲಿಷ್ ಹಾಗೂ ಮಕ್ಕಳ ನಾಟಕವೂ ಪ್ರದರ್ಶನಗೊಳ್ಳಲಿದ್ದು, ಎಲ್ಲಾ ನಾಟಕಗಳಿಗೂ ಉಚಿತ ಪ್ರವೇಶವಿದೆ.</p><p>ಎಲ್ಲಾ ನಾಟಕಗಳು ಸಂಜೆ 6.30ರಿಂದ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಆವರಣದೊಳಗಡೆ ಪ್ರದರ್ಶನಗೊಳ್ಳಲಿದೆ. ಈ ನಾಟಕೋತ್ಸವಕ್ಕೆ ರಂಗ ಅಧ್ಯಯನ ಕೇಂದ್ರ, ಕನ್ನಡ ವಿಭಾಗ, ಅಸ್ತಿತ್ವ ಮಂಗಳೂರು, ಅರೆಹೊಳೆ ಪ್ರತಿಷ್ಠಾನ, ಜೆಸಿಐ ಮಂಗಳೂರು ಲಾಲ್ ಭಾಗ್ ಇವರ ಸಹಭಾಗಿತ್ವವಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p><strong>ಪ್ರದರ್ಶನಗೊಳ್ಳುವ ನಾಟಕಗಳ ವಿವರ:</strong></p><p>14ರಂದು ನಾಟಕ: ದೀಪಧಾರಿಣಿ (ಕೊಂಕಣಿ), ತಂಡ: ಅನುಭೂತಿ, ಮೈಸೂರು. ನಿರ್ದೇಶನ: ಶ್ರೀಪಾದ ಭಟ್.</p><p>15ರಂದು ನಾಟಕ: ನೃತ್ಯಗಾಥಾ (ಕನ್ನಡ), ತಂಡ: ನೃತ್ಯನಿಕೇತನ ಕೊಡವೂರು ಉಡುಪಿ. ನಿರ್ದೇಶನ: ಶ್ರೀಪಾದ ಭಟ್. </p><p>16ರಂದು ನಾಟಕ: ಉರ್ಮಿಳಾ (ಇಂಗ್ಲಿಷ್), ತಂಡ: ಆದಿಶಕ್ತಿ, ಪುದುಚರಿ, ನಿರ್ದೇಶನ: ನಿಮ್ಮಿ ರಫಾಯಲ್.</p><p>17ರಂದು ನಾಟಕ: ಮರ ಮತ್ತು ಮನುಷ್ಯ (ಪಪೆಟ್ ಶೋ) ನಿರ್ದೇಶನ: ಶ್ರವಣ್ ಹೆಗ್ಗೋಡು., ಬ್ಲಾಕ್ ಬಲೂನ್ (ಕನ್ನಡ) ನಿರ್ದೇಶನ: ಅರುಣ್ ಲಾಲ್, ಕೇರಳ, ತಂಡ: ನಿರ್ದಿಗಂತ ಮೈಸೂರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಇಲ್ಲಿಯ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ನ ರಂಗ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ಇದೇ 14ರಿಂದ 17ರ ವರೆಗೆ ಬಹುಭಾಷಾ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ.</p><p>ಮೊದಲ ದಿನ ಮೈಸೂರಿನ ಅನುಭೂತಿ ತಂಡದಿಂದ, ಶ್ರೀ ವಿದ್ಯಾ ಅವರು ಅಭಿನಯಿಸುವ ದೀಪಧಾರಿಣಿ ಎಂಬ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕೋತ್ಸವದಲ್ಲಿ ಕನ್ನಡ, ಕೊಂಕಣಿ, ಇಂಗ್ಲಿಷ್ ಹಾಗೂ ಮಕ್ಕಳ ನಾಟಕವೂ ಪ್ರದರ್ಶನಗೊಳ್ಳಲಿದ್ದು, ಎಲ್ಲಾ ನಾಟಕಗಳಿಗೂ ಉಚಿತ ಪ್ರವೇಶವಿದೆ.</p><p>ಎಲ್ಲಾ ನಾಟಕಗಳು ಸಂಜೆ 6.30ರಿಂದ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಆವರಣದೊಳಗಡೆ ಪ್ರದರ್ಶನಗೊಳ್ಳಲಿದೆ. ಈ ನಾಟಕೋತ್ಸವಕ್ಕೆ ರಂಗ ಅಧ್ಯಯನ ಕೇಂದ್ರ, ಕನ್ನಡ ವಿಭಾಗ, ಅಸ್ತಿತ್ವ ಮಂಗಳೂರು, ಅರೆಹೊಳೆ ಪ್ರತಿಷ್ಠಾನ, ಜೆಸಿಐ ಮಂಗಳೂರು ಲಾಲ್ ಭಾಗ್ ಇವರ ಸಹಭಾಗಿತ್ವವಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p><strong>ಪ್ರದರ್ಶನಗೊಳ್ಳುವ ನಾಟಕಗಳ ವಿವರ:</strong></p><p>14ರಂದು ನಾಟಕ: ದೀಪಧಾರಿಣಿ (ಕೊಂಕಣಿ), ತಂಡ: ಅನುಭೂತಿ, ಮೈಸೂರು. ನಿರ್ದೇಶನ: ಶ್ರೀಪಾದ ಭಟ್.</p><p>15ರಂದು ನಾಟಕ: ನೃತ್ಯಗಾಥಾ (ಕನ್ನಡ), ತಂಡ: ನೃತ್ಯನಿಕೇತನ ಕೊಡವೂರು ಉಡುಪಿ. ನಿರ್ದೇಶನ: ಶ್ರೀಪಾದ ಭಟ್. </p><p>16ರಂದು ನಾಟಕ: ಉರ್ಮಿಳಾ (ಇಂಗ್ಲಿಷ್), ತಂಡ: ಆದಿಶಕ್ತಿ, ಪುದುಚರಿ, ನಿರ್ದೇಶನ: ನಿಮ್ಮಿ ರಫಾಯಲ್.</p><p>17ರಂದು ನಾಟಕ: ಮರ ಮತ್ತು ಮನುಷ್ಯ (ಪಪೆಟ್ ಶೋ) ನಿರ್ದೇಶನ: ಶ್ರವಣ್ ಹೆಗ್ಗೋಡು., ಬ್ಲಾಕ್ ಬಲೂನ್ (ಕನ್ನಡ) ನಿರ್ದೇಶನ: ಅರುಣ್ ಲಾಲ್, ಕೇರಳ, ತಂಡ: ನಿರ್ದಿಗಂತ ಮೈಸೂರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>