ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್ : ಜನವರಿ 12 ರಂದು ಎನ್ ಐ ಟಿ ಕೆ ಕರಾವಳಿ ಮ್ಯಾರಥಾನ್

Last Updated 1 ಅಕ್ಟೋಬರ್ 2019, 13:05 IST
ಅಕ್ಷರ ಗಾತ್ರ

ಸುರತ್ಕಲ್: ‘ಸದೃಢ ಯುವಜನರು ದೇಶದ ಆಸ್ತಿ, ದುಶ್ಚಟ ಮುಕ್ತ ಯುವ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ’ ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್ ಅರ್ಜುನ್ ದೇವಯ್ಯ ಹೇಳಿದರು.

ಸುರತ್ಕಲ್ ಎನ್ ಐ ಟಿ ಕೆಯಲ್ಲಿ ‘ಕರಾವಳಿ ಮ್ಯಾರಥಾನ್’ ಧ್ಯೇಯ ವಾಕ್ಯ ಬಿಡುಗಡೆ ಸಮಾರಂಭ ಹಾಗೂ ವಿದ್ಯಾರ್ಥಿ ಜತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಟಿ ಕೃಷ್ಣಾ ಮಾತನಾಡಿ, ‘ಪ್ರಕೃತಿ ಉಳಿಸಲು ಮೊದಲು ನಾವು ಪಣ ತೊಡಬೇಕು. ಬದಲಾದ ಜೀವನ ಶೈಲಿ ಪ್ರಕೃತಿ ಮೇಲೆ ಪರಿಣಾಮ ಬೀರುತ್ತದೆ’ ಎಂದರು. ಎನ್ ಐ ಟಿ ಕೆ ಹಳೆ ವಿದ್ಯಾರ್ಥಿ ಅದ್ಯಕ್ಷ ಕೃಷ್ಣಮೂರ್ತಿ, ಸಂಘದ ಉಪಾಧ್ಯಕ್ಷ ನಿರಂಜನ್, ಡೀನ್ ಕೆ.ಪಿ ವಿಠಲ್, ಜಗನ್ನಾಥ್ ನಾಯಕ್, ವಿದ್ಯಾರ್ಥಿ ಸಂಘದ ಅದ್ಯಕ್ಷ ನಿಹಾಲ್ ಶೆಟ್ಟಿ, ಕಾರ್ತಿಕ್, ಉಪಸ್ಥಿತಿ ಇದ್ದರು.

ಜನವರಿ 12 ರಂದು ಸುರತ್ಕಲ್ ಎನ್ ಐ ಟಿ ಕೆ ಯಿಂದ ಪಣಂಬೂರು ಬೀಚ್ ತನಕ ಮ್ಯಾರಥಾನ್ ನಡೆಯಲಿದ್ದು ಸುಮಾರು 5ಸಾವಿರ ವಿದ್ಯಾರ್ಥಿಗಳು ಭಾಗವಹಿಸುವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT