ಲಾಕ್ಡೌನ್ ಹೇರಿಕೆಯಾದ ದಿನದ ಹಿಂದಿನ ದಿನ ನಗರದ ಪಂಪ್ವೆಲ್ ಜಂಕ್ಷನ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನನ್ನು ಆಟೊ ಚಾಲಕರು ತುಂಡಾದ ಕಾಲಿನೊಂದಿಗೆ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಮೊಣಕಾಲಿನ ಕೆಳಭಾಗದಲ್ಲಿ ತುಂಡಾಗಿದ್ದ ಕಾಲುಗಳನ್ನು ಜೋಡಿಸುವುದು ಅತ್ಯಂತ ಕ್ಲಿಷ್ಟಕರವಾಗಿತ್ತು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೈಕ್ರೋ ಸರ್ಜರಿ ವಿಭಾಗದ ತಜ್ಞ ಡಾ.ಲತೀಶ್ ಮತ್ತು ಡಾ.ವಾಸುದೇವ ರೆಡ್ಡಿ, ಡಾ.ಅನಂತ್ ಸೋಮಯಾಜಿ ನೇತೃತ್ವದ ವೈದ್ಯರು ತಂಡರೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿದರು.