ಈ ಕಾರ್ಯಕ್ರಮದ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರತಿಷ್ಠಾನದ ಅಧ್ಯಕ್ಷ ಭಾರವಿ ದೇರಾಜೆ, ‘ಶನಿವಾರ ಕಾರ್ಯಕ್ರಮದ ಆರಂಭದಲ್ಲಿ ಸೌರಬ್ ಗುಲವಾನಿ ಹಾಗೂ ಸಂದೀಪನ್ ಮುಖರ್ಜಿ ತಬಲಾ ಕಛೇರಿ ನೀಡಲಿದ್ದಾರೆ. ನಂತರ ನಿಶಾದ್ ವ್ಯಾಸ್ ಗಾಯನ ನಡೆಸಿಕೊಡಲಿದ್ದಾರೆ. ಅದಾದ ಬಳಿಕ ಕಶ್ಯಪ್ ಬಂಧುಗಳು ಗಾಯನ ಪ್ರಸ್ತುತಿ ಪಡಿಸುವರು. ಭಾನುವಾರ ಮುಂಜಾನೆ ಕಶ್ಯಪ್ ಬಂಧುಗಳು ರಾಗಗಳ ಪ್ರಸ್ತುತಿಯ ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದರು.