ಮರುಕಳಿಸಿತು ಸೈನಿಕ ಪ್ರವೃತ್ತಿ: ಗಣಪತಿ ಶಾಸ್ತ್ರಿ ಅವರು 15 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಿದವರು. ಸೇನೆಯಿಂದ ನಿವೃತ್ತರಾದ ಬಳಿಕ ಅರೂವರೆ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ
ದ್ದರು. ಆನಂತರ 2017 ಅಕ್ಟೋಬರ್ನಲ್ಲಿ ಪ್ರೊಬೆಷನರಿ ತಹಶೀಲ್ದಾರ್ ಆಗಿ ಬಳಿಕ, 2019 ಜನವರಿಯಲ್ಲಿ ಬೆಳ್ತಂಗಡಿಯ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಕಚೇರಿಯಿಂದ ತಾವಿರುವ ಸರ್ಕಾರಿ ವಸತಿಗೃಹಕ್ಕೆ ತಪ್ಪಿಯೂ ಜೀಪಿನಲ್ಲಿ ಹೋಗುವುದಿಲ್ಲ, ನಡೆದೇ ಹೋಗುತ್ತಾರೆ.