ತಲೆ ಮರೆಸಿಕೊಂಡಿರುವ ಆರೋಪಿಗಳ ಮನೆಗೆ ಅಂಟಿಸಿದ ತಿಂಗಳ ಈಚೆಗೆ ಅಂಟಿಸಿದ ಎರಡನೇ ನೋಟಿಸ್ ಇದಾಗಿದೆ. ಪ್ರಕರಣದ ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಮೊಹಮ್ಮದ್ ಮುಸ್ತಾಫ ಎಸ್. ಹಾಗೂ ಸುಳ್ಯ ಕಲ್ಲುಮುಟ್ಟು ಮನೆಯ ಉಮ್ಮರ್ ಫಾರೂಕ್ ತಲೆ ಮರೆಸಿಕೊಂಡಿದ್ದು, ಅವರ ಮನೆಗಳಿಗೆ ಎನ್ಐಎ ಅಧಿಕಾರಿಗಳು 2023ರ ಜೂನ್ ತಿಂಗಳಿನಲ್ಲೂ ನೋಟಿಸಿ ಅಂಟಿಸಿದ್ದರು. ಜೂನ್ 30ರ ಒಳಗೆ ಶರಣಾಗುವಂತೆ ಗಡುವು ವಿಧಿಸಿದ್ದರು. ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನ ನೀಡಲಾಗುವುದು ಎಂದು ಸುಳ್ಯ ಹಾಗೂ ಬೆಳ್ಳಾರೆ ಪಟ್ಟಣಗಳಲ್ಲಿ ಧ್ವನಿವರ್ಧಕ ಬಳಸಿಯೂ ಪ್ರಚಾರ ಮಾಡಿದ್ದರು.