ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವಳದ ಪುಷ್ಕರಣಿಯಲ್ಲಿ ಶಿಲಾಮಯ ಕಟ್ಟೆಯ ಕಾಮಗಾರಿ ಶನಿವಾರ ಸಂಪೂರ್ಣಗೊಳ್ಳಲಿದೆ. ಧ್ವಜಾರೋಹಣದ ಮೊದಲ ದಿನ ಸಂಜೆ ವಾಸ್ತುಪೂಜೆ, ವಾಸ್ತುಬಲಿ, ರಾಕ್ಷೋಘ್ನ ಹೋಮ ನಡೆಯಲಿದ್ದು ಧ್ವಜಾರೋಹಣದ ಬಳಿಕ ಪುಷ್ಕರಣಿಯ ತಳಭಾಗದ ವರುಣ ದೇವರಿಗೆ ಸಾಮೂಹಿಕ ವರುಣ ಪೂಜೆ ನಡೆಯಲಿದೆ. ಭಕ್ತರಿಗೆ ವೀಕ್ಷಣೆ, ಸೇವಾ ಪೂಜೆಗೆ ಅವಕಾಶವಿದೆ ಎಂದರು.