ಮಂಗಳೂರು: ನಗರದ ಡೊಂಗರಕೇರಿಯ ವೆಂಕಟರಮಣ ದೇವಸ್ಥಾನದ ಸಮೀಪ ದೊರೆತಿದ್ದ ಹಾವಿನ ಮೊಟ್ಟೆಯಿಂದ ಎಂಟು ಮರಿಗಳು ಹೊರಬಂದಿವೆ.
ಶಮಿತ್ ಸುವರ್ಣ ಎಂಬವವರಿಗೆ ಕಟ್ಟಡ ಕೆಲಸ ನಿರ್ಮಾಣದ ಸಂದರ್ಭದಲ್ಲಿ ಕಂಡ ಹಾವಿನ ಮೊಟ್ಟೆಯ ಬಗ್ಗೆ ಉರಗ ಪ್ರೇಮಿ ಅಜಯ್ ಅವರಿಗೆ ಮಾಹಿತಿ ನೀಡಿದ್ದರು. ಅವರು ಉರಗ ರಕ್ಷಕ ಸ್ನೇಕ್ ಕಿರಣ್ ಸಹಕಾರದಲ್ಲಿ ಮೊಟ್ಟೆಗಳಿಗೆ ಕೃತಕ ಕಾವು ಕೊಟ್ಟು, ಇದರಿಂದ ಹೊರಬಂದ ಎಂಟು ಹೆಬ್ಬಾವು ಮರಿಗಳನ್ನು ಬಂಟ್ವಾಳ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ ಮಾರ್ಗದರ್ಶನದಂತೆ ಅರಣ್ಯಕ್ಕೆ ಬಿಡಲಾಗಿದೆ.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರೀತಮ್ ಎಸ್. ಪೂಜಾರಿ, ಅರಣ್ಯ ರಕ್ಷಕ ಶೋಭಿತ್ ರಾಜ್, ಅಜಯ್, ವಾಹನ ಚಾಲಕ ಜಯರಾಮ್ ಇದ್ದರು.