<p><strong>ಮಂಗಳೂರು</strong>: ನಟ ಕಿರಣ್ ರಾಜ್ ಅಭಿನಯದ, ಗುರುತೇಜ್ ಶೆಟ್ಟಿ ನಿರ್ದೇಶನದ ‘ಸ್ಟಾರ್ ಕ್ರಿಯೇಷನ್ಸ್’ನ ‘ರಾನಿ’ ಕನ್ನಡ ಸಿನಿಮಾ ಸೆ. 12ರಂದು ಬಿಡುಗಡೆಯಾಗಲಿದೆ.</p>.<p>ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಗುರುತೇಜ್ ಶೆಟ್ಟಿ, ‘ರಾನಿ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಿರುವ ಕೌಟುಂಬಿಕ ಮನರಂಜನಾ ಚಿತ್ರ. ಸಿನಿಮಾದಲ್ಲಿ ಮೂವರು ನಾಯಕಿಯರಿದ್ದಾರೆ. ಕರಾವಳಿ ಭಾಗದ ತಂತ್ರಜ್ಞರೇ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಈ ಊರಿನವರೇ ಆದ ಮಣಿಕಾಂತ ಕದ್ರಿ ಸಂಗೀತ ನೀಡಿದ್ದಾರೆ. ನಿರ್ಮಾಪಕರಾದ ಚಂದ್ರಕಾಂತ ಪೂಜಾರಿ ಹಾಗೂ ಉಮೇಶ್ ಹೆಗ್ಡೆಯವರೂ ಕರಾವಳಿಯವರು. ಕರಾವಳಿಯ ಪ್ರೇಕ್ಷಕರು ಈ ಸಿನಿಮಾವನ್ನು ಗೆಲ್ಲಿಸಬೇಕು’ ಎಂದರು.</p>.<p>‘ಈ ಸಿನಿಮಾವನ್ನು ಆ. 30ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದೆವು. ಕನ್ನಡದ ‘ಕೃಷ್ಣಂ ಪ್ರಣಯ ಸಖಿ‘ ಹಾಗೂ ‘ಭೀಮ’ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ‘ರಾನಿ’ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆವು’ ಎಂದರು.</p>.<p>ನಾಯಕ ನಟ ಕಿರಣ್ ರಾಜ್, ‘ಕನ್ನಡ ಚಿತ್ರಮಂದಿರಗಳು ಮತ್ತೆ ಪ್ರೇಕ್ಷಕರಿಂದ ತುಂಬುತ್ತಿವೆ. ನಮ್ಮ ಸಿನಿಮಾ ಕೂಡಾ ಪ್ರೇಕ್ಷಕರನ್ನು ಇದೇ ರೀತಿ ರಂಜಿಸಲಿದೆ’ ಎಂದರು.</p>.<p>ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ, ‘ಮಂಗಳೂರಿನ ವಿಸ್ಮಯ ವಿನಾಯಕ, ಮೋಹನ್ ರಕ್ಷಿತಾ ಸುರೇಶ್ ಅವರು ಈ ಸಿನಿಮಾಕ್ಕಾಗಿ ಗೀತೆಗಳನ್ನು ಹಾಡಿದ್ದಾರೆ’ ಎಂದರು.</p>.<p>ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ ಪೂಜಾರಿ ಹಾಗೂ ಉಮೇಶ್ ಹೆಗ್ಡೆ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ನಟ ಕಿರಣ್ ರಾಜ್ ಅಭಿನಯದ, ಗುರುತೇಜ್ ಶೆಟ್ಟಿ ನಿರ್ದೇಶನದ ‘ಸ್ಟಾರ್ ಕ್ರಿಯೇಷನ್ಸ್’ನ ‘ರಾನಿ’ ಕನ್ನಡ ಸಿನಿಮಾ ಸೆ. 12ರಂದು ಬಿಡುಗಡೆಯಾಗಲಿದೆ.</p>.<p>ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಗುರುತೇಜ್ ಶೆಟ್ಟಿ, ‘ರಾನಿ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಿರುವ ಕೌಟುಂಬಿಕ ಮನರಂಜನಾ ಚಿತ್ರ. ಸಿನಿಮಾದಲ್ಲಿ ಮೂವರು ನಾಯಕಿಯರಿದ್ದಾರೆ. ಕರಾವಳಿ ಭಾಗದ ತಂತ್ರಜ್ಞರೇ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಈ ಊರಿನವರೇ ಆದ ಮಣಿಕಾಂತ ಕದ್ರಿ ಸಂಗೀತ ನೀಡಿದ್ದಾರೆ. ನಿರ್ಮಾಪಕರಾದ ಚಂದ್ರಕಾಂತ ಪೂಜಾರಿ ಹಾಗೂ ಉಮೇಶ್ ಹೆಗ್ಡೆಯವರೂ ಕರಾವಳಿಯವರು. ಕರಾವಳಿಯ ಪ್ರೇಕ್ಷಕರು ಈ ಸಿನಿಮಾವನ್ನು ಗೆಲ್ಲಿಸಬೇಕು’ ಎಂದರು.</p>.<p>‘ಈ ಸಿನಿಮಾವನ್ನು ಆ. 30ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದೆವು. ಕನ್ನಡದ ‘ಕೃಷ್ಣಂ ಪ್ರಣಯ ಸಖಿ‘ ಹಾಗೂ ‘ಭೀಮ’ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ‘ರಾನಿ’ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆವು’ ಎಂದರು.</p>.<p>ನಾಯಕ ನಟ ಕಿರಣ್ ರಾಜ್, ‘ಕನ್ನಡ ಚಿತ್ರಮಂದಿರಗಳು ಮತ್ತೆ ಪ್ರೇಕ್ಷಕರಿಂದ ತುಂಬುತ್ತಿವೆ. ನಮ್ಮ ಸಿನಿಮಾ ಕೂಡಾ ಪ್ರೇಕ್ಷಕರನ್ನು ಇದೇ ರೀತಿ ರಂಜಿಸಲಿದೆ’ ಎಂದರು.</p>.<p>ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ, ‘ಮಂಗಳೂರಿನ ವಿಸ್ಮಯ ವಿನಾಯಕ, ಮೋಹನ್ ರಕ್ಷಿತಾ ಸುರೇಶ್ ಅವರು ಈ ಸಿನಿಮಾಕ್ಕಾಗಿ ಗೀತೆಗಳನ್ನು ಹಾಡಿದ್ದಾರೆ’ ಎಂದರು.</p>.<p>ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ ಪೂಜಾರಿ ಹಾಗೂ ಉಮೇಶ್ ಹೆಗ್ಡೆ ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>