ಮಂಗಳೂರು: ಆಸ್ತಿಯೊಂದರ ಪಹಣಿ ದಾಖಲೆ (ಆರ್ಟಿಸಿ) ಬದಲಾವಣೆಗೆ ₹ 3,000 ಲಂಚ ಪಡೆದ ಪ್ರಕರಣದಲ್ಲಿ ಸುಳ್ಯ ತಾಲ್ಲೂಕು ಸಂಪಾಜೆ ಗ್ರಾಮದ ಹಿಂದಿನ ಗ್ರಾಮ ಕರಣಿಕ ವಿನೋದ್ ಕುಮಾರ್ ಅಪರಾಧಿ ಎಂದು ಸಾರಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ವಿಶೇಷ ನ್ಯಾಯಾಲಯ, ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹ 10,000 ದಂಡ ವಿಧಿಸಿದೆ.