ಕಡಬ ಕೆಂಚಭಟ್ರೆಯಲ್ಲಿರುವ ಭಾರತೀಯ ರಬ್ಬರ್ ಸಂಶೋಧನಾ ಕೇಂದ್ರದ ವಿಜ್ಞಾನಿ, ತಮಿಳುನಾಡಿನ ರವಿಚಂದ್ರನ್ ಅವರು ಬುಧವಾರ ಸಂಜೆ ಬೈಕ್ನಲ್ಲಿ ಬಂದು, ಇಲ್ಲಿಗೆ ಸಮೀಪದ ಹೊಸ್ಮಠದಲ್ಲಿ ಹೊಳೆಗೆ ಹಾರಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅವರನ್ನು ಸಾರ್ವಜನಿಕರು ಹಾಗೂ ಇಬ್ಬರು ಲೈನ್ಮನ್ಗಳು ಸೇರಿ ರಕ್ಷಣೆ ಮಾಡಿದ್ದಾರೆ. ಕಡಬ ಎಸ್.ಐ ರುಕ್ಮ ನಾಯ್ಕ್ ಮತ್ತು ಸಿಬ್ಬಂದಿ, ಅವರನ್ನು ಸಮುದಾಯ ಆಸ್ಪತ್ರೆಗೆ ದಾಖಲಿಸಿದರು.