ಪುತ್ತೂರು: ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಧರೆ ಕುಸಿದು ಮನೆಯೊಂದಕ್ಕೆ ಹಾನಿಯಾದ ಘಟನೆ ಬುಧವಾರ ಪುತ್ತೂರು ನಗರದ ಹೊರವಲಯದ ನೆಹರೂ ನಗರ ಸಮೀಪದ ಸಿಟಿಗುಡ್ಡೆಯಲ್ಲಿ ನಡೆದಿದೆ.
ಸಿಟಿಗುಡ್ಡೆ ನಿವಾಸಿ ದುರ್ಗಾ ಪ್ರಸಾದ್ ಮನೆಯ ಹಿಂಬದಿಯ ಧರೆಯ ಮಣ್ಣು ಕುಸಿದು ಮನೆಯ ಬದಿಗೆ ಬಿದ್ದಿದೆ. ಮನೆಯ ಗೋಡೆಗೆ ಹಾನಿಯಾಗಿದೆ. ಗುಡ್ಡದ ಮಣ್ಣು ಕುಸಿದು ರಸ್ತೆಗೆ ಬೀಳತೊಡಗಿದ್ದು, ರಸ್ತೆ ಸಂಪರ್ಕ ಕಡಿತದ ಆತಂಕ ಎದುರಾಗಿದೆ.