ಉತ್ತರ ಪ್ರದೇಶದ ವಿವಿಧ ಭಾಗಗಳು, ಕಾನ್ಪುರ, ಸೂರತ್, ಭವನಗರ, ಅಮೃತಸರ, ಶ್ರೀಲಂಕಾ ಸೇರಿದಂತೆ ದೇಶ, ವಿದೇಶಗಳ ಹಲವು ಸ್ಥಳಗಳಿಂದ 100ಕ್ಕೂ ಹೆಚ್ಚು ಅಂಧ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಚಿತ್ರಕಲೆ, ಏಕಪಾತ್ರಾಭಿನಯ, ನೃತ್ಯ ಸೇರಿದಂತೆ ಹಲವು ಸ್ಪರ್ಧೆಗಳನ್ನು ಈ ಮಕ್ಕಳಿಗಾಗಿ ಆಯೋಜಿಸಲಾಗಿದೆ.